Connect with us

    DAKSHINA KANNADA

    “ಬಿಜೆಪಿ-ಸಂಘ ಪರಿವಾರದಲ್ಲಿ ಪ್ರಚೋದನೆ, ಗಲಾಟೆ, ದಂಗೆಗೆ ತರಬೇತಿ ನೀಡಲಾಗುತ್ತದೆ”: ಬಿಜೆಪಿಯನ್ನು ತರಾಟೆಗೆ ತಗೊಂಡ ಸಚಿವ ದಿನೇಶ್ ಗುಂಡೂರಾವ್

    ಮಂಗಳೂರು, ಆಗಸ್ಟ್ 30: ಸತ್ಯವನ್ನು ಸುಳ್ಳು ಮಾಡುವುದೇ ಆರೆಸ್ಸೆಸ್ ಕೆಲಸ. ಯಾವ ರೀತಿ ಪ್ರಚೋದನೆ ಮಾಡಬೇಕು, ಗಲಾಟೆ ಎಬ್ಬಿಸಬೇಕು, ದಂಗೆ ಮಾಡಬೇಕೆಂಬುದರ ಬಗ್ಗೆ ಅವರಿಗೆ ತರಬೇತಿ ಕೊಡುತ್ತಾರೆ. ಬಿಜೆಪಿ, ಸಂಘ ಪರಿವಾರದಲ್ಲಿ ಇದಕ್ಕೆಂದೆ ತರಬೇತಿ ಇರುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

    ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮೈಸೂರಿನ ಮುಡಾ ಹಗರಣದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಸುಮ್ಮನೆ ಬೊಬ್ಬೆ ಹಾಕಿ ಸುಳ್ಳನ್ನು ಸತ್ಯ ಮಾಡಲು ದೇಶಾದ್ಯಂತ ಯತ್ನಿಸುತ್ತಿದ್ದಾರೆ. ಅವರ ವ್ಯವಸ್ಥೆಯೇ ಅದೇ ರೀತಿ. ಅದನ್ನೇ ಇಲ್ಲಿ ಸಹ ಮಾಡಲು ಹೊರಟಿದ್ದಾರೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯರ ನಡೆ ಬಹಳ ಸ್ಪಷ್ಟವಾಗಿದೆ. ಅವರು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರ ನಡೆ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಯಾವ ರೀತಿ ಪಕ್ಷಪಾತ ಮಾಡಿದ್ದಾರೆಂದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ. ಪ್ರಾಸಿಕ್ಯೂಶನ್, ಕೋರ್ಟ್ ಅದೆಲ್ಲಾ ಜಡ್ಜ್ ತೀರ್ಮಾನ ಮಾಡುತ್ತಾರೆ. ರಾಜ್ಯಪಾಲರು ಮುಖ್ಯಮಂತ್ರಿಗೆ 12 ಗಂಟೆಯ ಒಳಗೆ ತರಾತುರಿಯಲ್ಲಿ ಶೋಕಾಸ್ ನೋಟಿಸ್ ನೀಡಿದ್ದಾರೆ. ನಮ್ಮ ಮುಖ್ಯಮಂತ್ರಿ ಯಾವುದೇ ಅಧಿಕಾರ ದುರುಪಯೋಗ ಮಾಡಿಲ್ಲ ಭ್ರಷ್ಟಾಚಾರ ಮಾಡಿಲ್ಲ ಎಂದರು. ರಾಜ್ಯಪಾಲರು ಸರ್ಕಾರದ ಸಾಂವಿಧಾನಿಕ ಮುಖ್ಯಸ್ಲ. ಮುಖ್ಯಸ್ಥ ಸರಕಾರದ ವಿರುದ್ಧವೇ ಷಡ್ಯಂತ್ರದಲ್ಲಿ ಭಾಗಿಯಾದರೆ ಏನೆಂದು ಕರೆಯೋದು. ಇದು ರಾಜ್ಯಕ್ಕೆ ಮಾಡಿದ ದ್ರೋಹ ಅಲ್ವಾ..? ಎಂದು ಪ್ರಶ್ನಿಸಿದ ದಿನೇಶ್ ಗುಂಡೂರಾವ್, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವರು ದ್ರೋಹ ಮಾಡಿದ್ದಾರೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿದ್ದರಾಮಯ್ಯ ನವರ ಬಗ್ಗೆ ಮಾತನಾಡಲು ಇವರಿಗೆ ಯಾವುದೇ ನೈತಿಕತೆ ಇಲ್ಲ. ಖರ್ಗೆ ಕುಟುಂಬಕ್ಕೆ ಜಾಗ ನೀಡಿರುವ ಬಗ್ಗೆ ನಿನ್ನೆ ಎಂ.ಬಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ ಮತ್ತು ಯಾವ ಆಧಾರದಲ್ಲಿ ಕೊಟ್ಟಿದ್ದಾರೆ, ಉದ್ದೇಶವೇನೆಂದು ಹೇಳಿದ್ದಾರೆ. ಬೆಲೆ ಕಡಿಮೆ, ರಿಯಾಯಿತಿ ಮಾಡಿ ಕೊಟ್ಟಿಲ್ಲ. ತೆಗೆದುಕೊಂಡ ಉದ್ದೇಶಕ್ಕೆ ಉಪಯೋಗಿಸಿಕೊಂಡ್ರೆ ಭೂಮಿ‌ ಉಳಿಯುತ್ತೆ ಆರ್.ಎಸ್.ಎಸ್ ನ ರಾಷ್ಟ್ರೋತ್ಥಾನ ಪರಿಷತ್, ಚಾಣಾಕ್ಷ ಯುನಿವರ್ಸಿಟಿಗೆ ಕಡಿಮೆ ಬೆಲೆಗೆ ಬೆಲೆ ಬಾಳುವ ಭೂಮಿ‌ ಮಾಡಿಕೊಂಡಿದ್ದಾರೆ.ಇಲ್ಲಿ ಯಾವುದೇ ರೀತಿಯ ಕಡಿಮೆ ಬೆಲೆ ಮಾಡಿಲ್ಲ. ಕೆದಕಕ್ಕೆ ಹೋದ್ರೆ ಇವರದ್ದೆ ನೂರು ಆಚೆ ಬರುತ್ತೆ ನೀವು ಮಾಡಬಾರದೆಲ್ಲ ಮಾಡಿದ್ದೀರಿ ಯಡಿಯೂರಪ್ಪ ಅವರು ಟ್ರಸ್ಟ್ ಗೆ ಜಿಂದಾಲ್ ನಿಂದ ದುಡ್ಡು ತಗೊಂಡಿಲ್ವಾ? ಮುಖ್ಯಮಂತ್ರಿಯಾಗಿ ಜಿಂದಾಲ್ ನಿಂದ ಚೆಕ್ ಮೂಲಕ ಹಣ ತಗೊಂಡ್ರು. ಯಾವ ಕಾರಣಕ್ಕಾಗಿ ಕೋಟಿ ಕೋಟಿ ಹಣ ಜಿಂದಾಲ್ ಅವರು ಕೊಟ್ರು ? 20, 40 ಕೋಟಿ‌ ತಗೊಂಡಿದ್ದಾರೆ. ಇವರು ಮೈನಿಂಗ್ ಗೆ ಅನುಮತಿ ಕೊಡುತ್ತಿದ್ರು ಯಾವ ಕಾರಣಕ್ಕೆ ಹಣ ಕೊಟ್ರು ಎಂದು ಸ್ಪಷ್ಟವಾಯ್ತಲ್ವ ಎಂದಿದ್ದಾರೆ.  ಬಿಜೆಪಿಯವರು ಅವರ ಕಾಲದಲ್ಲಿ ಎಲ್ಲ ಹಾಳು ಮಾಡಿ ಕೆಟ್ಟ ಕೆಲಸ ಮಾಡಿ ಹೋಗಿದ್ದಾರೆ ಈಗ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು‌ ಏನೇನು‌ ಮಾಡ್ತಿದ್ದಾರೆ. ಇದು ತಿರುಗುಬಾಣ ನಿಮ್ಮ ಮೇಲೆ ಆಗುತ್ತೆ ನಿರಾಣಿಯವರು ಇಂಡಸ್ಟ್ರಿಯಲ್ ಭೂಮಿ ತಗೊಂಡು ಇಂಟರ್ನ್ಯಾಷನಲ್ ಸ್ಕೂಲ್ ಮಾಡಿದ್ದಾರೆ. ಇನ್ನು ಎಷ್ಟೆಷ್ಟು ಕೇಸ್ ಇದೆಯೆಂದು ಗೊತ್ತಿಲ್ಲ ಹೇಳುವ ಮೊದಲು ನೀವು ಸರಿಯಿರಬೇಕು  ಎಂದು ಬಿಜೆಪಿಯನ್ನು ತರಾಟೆಗೆ ತಗೊಂಡರು.

    ಇದನ್ನೂ ಓದಿ…

    ಹಾಸ್ಟೆಲ್ ,ಪಿಜಿಗಳಲ್ಲಿರುವ ಹೆಣ್ಮಕ್ಕಳೇ ಬಿ ಕೇರ್ ಫುಲ್, ಹಾಸ್ಟೆಲ್ ವಾಶ್‌ರೂಂಗಳ ವಿಡಿಯೋಗಳು ಮಾರಾಟ್ಟಕಿವೆ..!

    Share Information
    Advertisement
    Click to comment

    You must be logged in to post a comment Login

    Leave a Reply