LATEST NEWS
ಮಂಗಳೂರು – ಮೆಸ್ಕಾಂನಿಂದಾಗಿ ಜಿಲ್ಲೆಯಲ್ಲಿ ಮೂರು ಜೀವ ಹೋಗಿದೆ -ವಿದ್ಯುತ್ ಬ್ರೇಕರ್ ಹಾಕಲು ಇವ್ರಿಗೆ ಈಗ ನೆನಪಿಗೆ ಬಂತಾ….? – ಐವನ್ ಡಿಸೋಜಾ ಗರಂ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಮಂಗಳರು ಜೂನ್ 29: ಮೆಸ್ಕಾಂನಿಂದಾಗಿ ಜಿಲ್ಲೆಯಲ್ಲಿ ಮೂರು ಜೀವ ಹೋಗಿದ್ದು, ಮೆಸ್ಕಾಂ ಈಗ ವಿದ್ಯುತ್ ಬ್ರೇಕರ್ ಹಾಕುತ್ತೇವೆ ಎಂದಿದ್ದಾರೆ. ಈಗ ಇವರಿಗೆ ಇದು ನೆನಪಿಗೆ ಬಂತಾ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಪ್ರಕೃತಿ ವಿಕೋಪದಿಂದ ಹಲವು ಸಮಸ್ಯೆ ಆಗಿದೆ. ಪ್ರಾಣಾಹಾನಿ, ಕೃಷಿ, ಇನ್ನಿತರ ಹಾನಿಗಳಾಗಿವೆ. ಮೆಸ್ಕಾಂ ನಿಂದಾಗಿ ಜಿಲ್ಲೆಯಲ್ಲಿ ಮೂರು ಜೀವ ಹೋಗಿದೆ. ಆದರೆ ಮೆಸ್ಕಾಂ ಎಂಡಿ ಪರಿಹಾರ ನೀಡ್ತೇವೆ ಎಂದಿದ್ದಾರೆ. ಆದ್ರೆ ಪರಿಹಾರ ಅಲ್ಲ ಇಲ್ಲಿ ಇಂತಹ ಅವಾಂತರ ಆಗಬಾರದು.ಎಂದ ಅವರು ಇದಕ್ಕೆ ಕಾರಣ ಯಾರು ಎಂದು ಪ್ರಶ್ನಿಸಿದರು.
ಇದೀಗ ಈಗಾ ಇವರು ಎಚ್ಚರ ಆಗಿದ್ದಾರೆ…?ವಿದ್ಯುತ್ ಬ್ರೇಕರ್ ಹಾಕಲು ಇವ್ರಿಗೆ ಈಗ ನೆನಪಿಗೆ ಬಂತಾ….? ಸಾವಿಗೆ ಯಾರು ಹೊಣೆ ಎಂದ ಅವರು ಇದೀಗ ಎಚ್ಚರವಾಗಿ ನಗರದಲ್ಲಿ 1600 ಬ್ರೇಕರ್ ಈಗಾ ಹಾಕಲು ಮುಂದಾಗಿದ್ದಾರೆ ಎಂದು ಸುದ್ದಿ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಪಡೆಯಲು ಸೂಚಿಸಲಾಗಿದೆ. ಈಗ ಬ್ರೇಕರ್ ಹಾಕಲು ಮುಂದಾಗಿದ್ದರೆ ಇದಕ್ಕೆ ಯಾವುದೇ ಸೆನ್ಸ್ ಇದೆ. ಈ ವರೆಗೆ ಈ ಯೋಜನೆ ಯಾಕೆ ಮಾಡಿಲ್ಲ ಎಂದು ತನಿಖೆ ಮಾಡಲಿ ಎಂದರು.
You must be logged in to post a comment Login