Connect with us

LATEST NEWS

ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಜಾಕ್ ನಿಧನ

ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಜಾಕ್ ನಿಧನ

ಕಾಸರಗೋಡು ಅಕ್ಟೋಬರ್ 20: ಜ್ವರದಿಂದ ಬಳಲುತ್ತಿದ್ದ ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್ ರಜಾಕ್ ಅವರು ಇಂದು ನಿಧನರಾಗಿದ್ದಾರೆ.

63 ವರ್ಷದ ಅಬ್ದುಲ್‌ ಅವರು ಮೂರು ದಿನಗಳಿಂದ ಜ್ವರ ಬಳಲುತ್ತಿದ್ದು, ನಗರದ ನುಳ್ಳಿಪಾಡಿ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರು ಪತ್ನಿ ಹಾಗೂ ನಾಲ್ಕು ಮಕ್ಕಳನ್ನು ಆಗಲಿದ್ದಾರೆ.

ಎರಡು ಬಾರಿ ಮಂಜೇಶ್ವರ ಕ್ಷೇತ್ರದಿಂದ ಕೇರಳ ವಿಧಾನಸಭೆಗೆ ಆಯ್ಕೆಯಾದ ಅಬ್ದುಲ್ ರಜಾಕ್ 2011ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಪಕ್ಷದಿಂದ ಸ್ಪರ್ಧಿಸಿದ್ದರು. ಅವರು ಸಿಪಿಎಂನ ಸಿ.ಎಚ್. ಕುಂಞಂಬುರನ್ನು 5825 ಮತಗಳಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. 2016ರಲ್ಲಿ ನಡೆದ ಚುನಾವಣೆಯಲ್ಲಿ ಕೇವಲ 89 ಮತಗಳಿಗೆ ಬಿಜೆಪಿಯ ಕೆ. ಸುರೇಂದ್ರ ಅವರನ್ನು ಸೋಲಿಸಿ ಎರಡನೆ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *