Connect with us

    DAKSHINA KANNADA

    ಮಂಗಳೂರು : ಸೆ. 19 ‘ಗಣೇಶ ಚತುರ್ಥಿ’ ಗೆ ಸಾರ್ವರ್ತ್ರಿಕ ರಜೆ ಘೋಷಣೆಗೆ ವಿಹೆಚ್‌ಪಿ ಆಗ್ರಹ..!

    ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿ ಗೆ ಸಾರ್ವರ್ತ್ರಿಕ ರಜೆ ಘೋಷಣೆಗೆ ವಿಶ್ವ ಹಿಂದೂ ಪರಿಷತ್ ಸರ್ಕಾರವನ್ನು ಆಗ್ರಹಿಸಿದೆ.

    ಮಂಗಳೂರು :ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿ ಗೆ ಸಾರ್ವರ್ತ್ರಿಕ ರಜೆ ಘೋಷಣೆಗೆ ವಿಶ್ವ ಹಿಂದೂ ಪರಿಷತ್ ಸರ್ಕಾರವನ್ನು ಆಗ್ರಹಿಸಿದೆ.

    ಇಡೀ ವಿಶ್ವದ ಹಿಂದುಗಳ ಅತ್ಯಂತ ಪ್ರಮುಖ ಹಬ್ಬ ಗಣೇಶ ಚತುರ್ಥಿ ಹಬ್ಬದ ರಜೆಯನ್ನು ಸೆಪ್ಟೆಂಬರ್ 19 ರಂದು ನೀಡಬೇಕಾಗಿ, ಈ ವರ್ಷದ ಸರಕಾರಿ ರಜೆಗಳ ಪಟ್ಟಿಯಲ್ಲಿ ಸೆಪ್ಟೆಂಬರ್ 18 ರಂದು ರಜೆ ಘೋಷಿಸಿದ್ದು, ಗಣೇಶ ಚತುರ್ಥಿ ಹಬ್ಬ ಸೆಪ್ಟೆಂಬರ್ 19 ರಂದು ಆಚರಿಸಲಿರುವ ಕಾರಣ ಅದೇ ದಿನ ರಜೆಯನ್ನು ನೀಡಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

    ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿಗಳಾದ ಶರಣ್ ಪಂಪುವೆಲ್, ಜಿಲ್ಲಾಧ್ಯಕ್ಷರಾದ ಎಚ್ ಕೆ ಪುರುಷೋತ್ತಮ, ಜಿಲ್ಲಾಕಾರ್ಯದರ್ಶಿ ಶಿವಾನಂದ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷರು ಮನೋಹರ್ ಸುವರ್ಣ, ವಿಭಾಗ ಸಂಯೋಜಕ್ ಪುನೀತ್ ಅತ್ತಾವರ, ಜಿಲ್ಲಾ ಸಂಯೋಜಕ್ ನವೀನ ಮೂಡುಶೆಡ್ಡೆ ಈ ಸಂದರ್ಭದಲ್ಲಿ ಉಪಸ್ಥಿತಿ ಇದ್ದರು.

    ಗಣೇಶ ಚತುರ್ಥಿ ಹಬ್ಬ ಇಡೀ ವಿಶ್ವದ ಹಿಂದುಗಳಿಗೆ ಅತ್ಯಂತ ಸಡಗರದ ಹಬ್ಬ, ಭಾದ್ರಪದ ಮಾಸದ ಶುಕ್ಲ ಪಕ್ಷ ಚತುರ್ಥಿ ದಿನ ಇಡೀ ಹಿಂದೂ ಸಮಾಜ ವಿಘ್ನವಿನಾಶಕ ಗಣೇಶನ ಹಬ್ಬವನ್ನು ಅನಾದಿಕಾಲದಿಂದಲೂ ಆಚರಿಸಿಕೊಂಡು ಬರುತ್ತಿದೆ.

    ಈ ವರ್ಷ ಶೋಭನ ನಾಮ ಸಂವತ್ಸರದಲ್ಲಿ ಅಂದರೆ 2023 ರಲ್ಲಿ ಗಣೇಶಚತುರ್ಥಿ ತಾರೀಕು ಸೆಪ್ಟೆಂಬರ್ 19 2023 ಮಂಗಳವಾರ ಆಚರಣೆ ನಡೆಯಲಿದ್ದು. ಆದರೆ ಸರಕಾರಿ ರಜೆಯ ಪಟ್ಟಿಯಲ್ಲಿ ತಾರೀಕು ಸೆಪ್ಟೆಂಬರ್ 18 2023 ಸೋಮವಾರ ರಜೆ ಇರುವುದು ನಮ್ಮ ಗಮನಕ್ಕೆ ಬಂದಿರುತ್ತದೆ.

    ಹಾಗಾಗಿ ತಾವುಗಳು ರಜೆಯನ್ನು ಬದಲಾವಣೆ ಮಾಡಿ ಗಣೇಶಚತುರ್ಥಿ ದಿನ ಅಂದರೆ ತಾರೀಕು ಸೆಪ್ಟೆಂಬರ್ 19 2023 ಮಂಗಳವಾರ ಸರಕಾರಿ ರಜೆಯನ್ನು ನೀಡುವಂತೆ ಕ್ರಮಕೈಗೊಳ್ಳಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರವನ್ನು ಆಗ್ರಹಿಸಲಾಯಿತು.

    Share Information
    Advertisement
    Click to comment

    You must be logged in to post a comment Login

    Leave a Reply