Connect with us

DAKSHINA KANNADA

ಮಂಗಳೂರು : ಅತ್ಯಾಚಾರ ಆರೋಪ ಪ್ರಕರಣ ಆರೋಪಿ ಉಮೇಶ್ ಸಾಲ್ಯಾನ್ ಖುಲಾಸೆ..!

ಮಂಗಳೂರು : ಅತ್ಯಾಚಾರ ಆರೋಪ ಪ್ರಕರಣದಲ್ಲಿ ಆರೋಪಿ ಉಮೇಶ್ ಸಾಲ್ಯಾನ್ ರವರನ್ನು ಖುಲಾಸೆಗೊಳಿಸಿ, ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಕೆಲಸ 2019ರಲ್ಲಿ ಆರೋಪಿ ಉಮೇಶ್ ಸಾಲ್ಯಾನ್ ಎಂಬುವರು ಬಸ್ಸಿನಲ್ಲಿ ಚಾಲಕ ಮಾಡಿಕೊಂಡಿರುವಾಗ ಪಿದ್ಯಾಥಿದಾರರನ್ನು ಪರಿಚಯಿಸಿಕೊಂಡು ಆತ್ಮೀಯತೆಯಿಂದಿದ್ದು, ನಂತರದ ದಿನಗಳಲ್ಲಿ ತನ್ನ ತಂದೆಯ ಶಸ್ತ್ರಚಿಕಿತ್ಸೆಗೆ ಹಣಬೇಕು ಎಂದು 1 ಲಕ್ಷ ಹಣವನ್ನು ಪಿದ್ಯಾವಿದಾರರಿಂದ ಪಡೆದುಕೊಂಡು, ಸದ್ರಿ ಹಣವನ್ನು 2 ತಿಂಗಳಲ್ಲಿ ಕೊಡುತ್ತೇನೆಂದು ಹೇಳಿ, ನಂತರ ಪಿದ್ಯಾವಿದಾರರು ಆರೋಪಿಯಲ್ಲಿ ಹಣ ಕೇಳಿದಾಗ ಆರೋಪಿಯು ಹಣ ಕೊಡದೇ ಸತಾಯಿಸುತ್ತಿದ್ದು, ವಿನಾಂಕ 20-11-2019ರಂದು ಹಣ ಕೊಡುವುದಾಗಿ ಹೇಳಿ ಪಿದ್ಯಾವಿದಾರರನ್ನು ತನ್ನ ಮನೆಗೆ ಕರೆಸಿಕೊಂಡು ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದು, ನಂತರ ನಿನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿ, ನಿರಂತರವಾಗಿ ಅತ್ಯಾಚಾರ ಮಾಡಿದ್ದು ಇದರಿಂದ ಪಿದ್ಯಾಥಿದಾರರು ಗರ್ಭಿಣಿ ಆಗಿದ್ದು, ನಂತರದ ದಿನಗಳಲ್ಲಿ ಆರೋಪಿಯು ಪಿದ್ಯಾಥಿದಾರರನ್ನು ಮದುವೆಯಾಗಲು ಒಪ್ಪಿರುವುದಿಲ್ಲ. ನಂತರ ದಿನಾಂಕ: 4-8-2020ರಂದು ಪಿದ್ಯಾವಿದಾರರು ಒಂದು ಹೆಣ್ಣು ಮಗುವಿಗೆ ಜನ್ಮನೀಡಿರುವುದಾಗಿದೆ. ಇದರ ವಿರುದ್ಧ ಬಟ್ಟೆ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ ಬಟ್ಟೆ ಪೊಲೀಸರು ಆರೋಪಿ ಉಮೇಶ್ ಸಾಲ್ಯಾನ್ ವಿರುದ್ಧ ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ  ಕಾಂತರಾಜು ಎಸ್.ವಿ.ರವರು ಆರೋಪಿ ಉಮೇಶ್ ಸಾಲ್ಯಾನ್‌ರವರನ್ನು ಖುಲಾಸೆಗೊಳಿಸಿ  ತೀರ್ಪು ನೀಡಿದ್ದಾರೆ. ಆರೋಪಿಯ ಪರವಾಗಿ ಮಂಗಳೂರಿನ ಖ್ಯಾತ ವಕೀಲರಾದ ಬಿ. ಅರುಣ ಬಂಗೇರ ಮತ್ತು ಲಿಹಾನ ಪರ್ವೀನ್ ರವರು ವಾದಿಸಿದ್ದರು.

 

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *