Connect with us

    DAKSHINA KANNADA

    ಮಂಗಳೂರು : 77 ನೇ ವರ್ಷದ ಸಂಘನಿಕೇತನ ಗಣೇಶೋತ್ಸವಕ್ಕೆ ಅದ್ದೂರಿ ಚಾಲನೆ

    ಮಂಗಳೂರು : ನಗರದ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ 77 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಧ್ಯುಕ್ತ ಚಾಲನೆಯು ದೀಪ ಬೆಳಗಿಸುವುದರಮೂಲಕ ಪ್ರಾರಂಭಗೊಂಡಿತು .

     

    ಚೇರಮನ್ , ಅರಿನ್ ಕ್ಯಾಪಿಟಲ್ ಚೇರ್ಮನ್ , ಮಣಿಪಾಲ್ ಗ್ಲೋಬಲ್ ಎಜುಕೇಶನ್ ಇದರ ಶ್ರೀ ಟಿ . ವಿ . ಮೋಹನದಾಸ್ ಪೈ ರವರು ನೆರವೇರಿಸಿದರು . ಪ್ರಾರಂಭದಲ್ಲಿ ಶ್ರೀ ಮಹಾಗಣಪತಿ ಪ್ರತಿಷ್ಠೆ ಹಾಗೂ ಉತ್ಸವದ ಉದ್ಘಾಟನೆ ನಡೆಯಿತು .

    ಬಳಿಕ ಧ್ವಜಾರೋಹಣ , ವಂದೇಮಾತರಂ , ಗಣಹೋಮ , ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ , ಸಭಾಕಾರ್ಯಕ್ರಮ ನೆರವೇರಿತು . ಮಧ್ಯಾನಃ ಮಹಾ ಪೂಜೆ ಸಾಯಂಕಾಲ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು . ಐದು ದಿನಗಳ ಪರ್ಯಂತ ವಿಶೇಷ ಕಾರ್ಯಕ್ರಮಗಳನ್ನು ಸಮಿತಿಯು ಆಯೋಜಿಸಿದ್ದು ಸಹಸ್ರಾರು ಭಜಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ .

    ಈ ಸಂದರ್ಭದಲ್ಲಿ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ , ವಿನೋದ್ ಶೆಣೈ , ರಘುವೀರ್ ಕಾಮತ್ , ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ , ಸತೀಶ್ ಪ್ರಭು , ಆನಂದ ಪಾಂಗಳ , ಕೆ . ಪಿ . ಟೈಲಾರ್ , ಸುರೇಶ್ ಕಾಮತ್ ,  ಸ್ವಾಮಿ ಪ್ರಸಾದ್ , ಯಸ್ ಆರ್ ಕುಡ್ವ , ಜೀವನರಾಜ್ ಶೆಣೈ , ಅಭಿಷೇಕ್ ಭಂಡಾರಿ , ನಂದನ್ ಮಲ್ಯ , ಪೂರ್ಣಿಮಾ ಶೆಣೈ , ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ , ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ , ಮಹಾಪೌರ ಸುಧೀರ್ ಶೆಟ್ಟಿ ಹಾಗೂ ನೂರಾರು ಸ್ವಯಂಸೇವಕರು ಉಪಸ್ಥಿತರಿದ್ದರು .

    ಚಿತ್ರ : ಮಂಜು ನೀರೇಶ್ವಾಲ್ಯ

    Share Information
    Advertisement
    Click to comment

    You must be logged in to post a comment Login

    Leave a Reply