Connect with us

    MANGALORE

    ಮಂಗಳೂರು : ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ 28ನೇ ವರ್ಷದ ಚಾತುರ್ಮಾಸ ವೃತ ಆರಂಭ

    ಚಿತ್ರ : ಮಂಜು ನೀರೇಶ್ವಾಲ್ಯ

    ಮಂಗಳೂರು : ಶಿರಾಲಿ ಶ್ರೀ ಚಿತ್ರಾಪುರ ಮಠ ಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ 28ನೇ ವರ್ಷದ ಚಾತುರ್ಮಾಸ ವೃತದ ಆಚರಣೆಯು ಈ ಬಾರಿ ಮಂಗಳೂರಿನ ರಥಬೀದಿ ಬಳಿ ಇರುವ ಶ್ರೀ ವಾಮನಾಶ್ರಮ ಸಮಾಧಿ ಮಠದಲ್ಲಿ ಪ್ರಾರಂಭಗೊಂಡಿತು .


    ಪ್ರಾತಃ ಕಾಲ ಶ್ರೀ ಉಮಾ ಮಹೇಶ್ವರ ದೇವರ ಸನ್ನಿಧಿಯಲ್ಲಿ ಮಹಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು , ಶ್ರೀಗಳವರು ಶ್ರೀ ದೇವರ ಪೂಜೆ ಪುರಸ್ಕಾರಗಳನ್ನು ತಮ್ಮ ದಿವ್ಯ ಹಸ್ತಗಳಿಂದ ನೆರವೇರಿಸಿದರು .

    ಬಳಿಕ ಶ್ರೀಗಳವರಿಂದ ಮಂಡಲ ಪೂಜೆ , ವ್ಯಾಸ / ಗುರು ಪೂರ್ಣಿಮೆಯ ಪರ್ವ ದಿನದಂದು ಪೂಜೆ ನಡೆದು ಶ್ರೀಗಳವರು ಚಾತುರ್ಮಾಸ ವ್ರತ ಸ್ವೀಕಾರ ಮಾಡಿದರು .

    ಈ ಸಂದರ್ಭದಲ್ಲಿ ಚಾತುರ್ಮಾಸ ಸಮಿತಿಯ ಎಲ್ಲೋರ್ ರಾಮ್ ಕಿಶೋರ್ ರಾವ್ , ಭವಾನಿ ಶಂಕರ್ ಕಂಡಲೂರ್, ಸಮಿತಿಯ ಪದಾಧಿಕಾರಿಗಳು ಹಾಗೂ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು .

     

    Share Information
    Advertisement
    Click to comment

    You must be logged in to post a comment Login

    Leave a Reply