Connect with us

    LATEST NEWS

    ರಸ್ತೆಯಲ್ಲಿ ತಲ್ವಾರ್ ಬೀಸಿ ಆತಂಕ ಸೃಷ್ಠಿಸಿದ ಯುವಕ

    ರಸ್ತೆಯಲ್ಲಿ ತಲ್ವಾರ್ ಬೀಸಿ ಆತಂಕ ಸೃಷ್ಠಿಸಿದ ಯುವಕ

    ಪುತ್ತೂರು ಸೆಪ್ಟೆಂಬರ್ 25: ಮಾನಸಿಕ ಅಸ್ವಸ್ಥನೋರ್ವ ರಸ್ತೆಯಲ್ಲಿ ತಲ್ವಾರ್ ಬೀಸಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪುಂಚತ್ತಾರಿನಲ್ಲಿ ನಡೆದಿದೆ.

    ಪುಂಚತ್ತಾರಿನ ನಿವಾಸಿ ಅವಿನಾಶ್ ಮಾನಸಿಕ ಅಸ್ವಸ್ಥಗೊಂಡ ಯುವಕನಾಗಿದ್ದು, ಪುಂಚತ್ತಾರು ಪೇಟೆಯ ಸುತ್ತ ತಲವಾರು ಝಳಪಿಸುತ್ತಾ ಕೆಲಕಾಲ ಸಾರ್ವಜನಿಕರ ಆತಂಕ ಸೃಷ್ಠಿಸಿದ್ದ.

    ಸ್ಥಳೀಯರು ಹಾಗೂ ಪೋಲೀಸರು ಈತನನ್ನು ಹಿಡಿಯಲು ಪ್ರಯತ್ನಿಸಿದರೂ ಸಫಲವಾಗಿಲ್ಲ. ಪೋಲೀಸ್ ಜೀಪ್ ನ ಬಳಿಗೂ ಬಂದು ಈತ ತಲ್ವಾರ್ ಬೀಸಿದ್ದು, ಬಳಿಕ ಪೋಲೀಸರು ಹಾಗೂ ಸ್ಥಳೀಯರು ಉಪಾಯವಾಗಿ ಆತನನ್ನು ಹಿಡಿದು ಮಂಗಳೂರಿನ ಕಂಕನಾಡಿ ಮಾನಸಿಕ ಅಸ್ವಸ್ಥರ ಆಸ್ಪತ್ರೆಗೆ ದಾಖಲಿಸಿದ್ದಾರೆ‌.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply