Connect with us

DAKSHINA KANNADA

ಅತಿ ವೇಗ, ನಿರ್ಲಕ್ಷ್ಯದಿಂದ ಅಪಘಾತ, 3 ಸಾವಿರ ದಂಡ ಕಕ್ಕಿಸಿದ ಮಂಗಳೂರು ಪೊಲೀಸರು..!

ಮಂಗಳೂರು :  ಅತೀ ವೇಗದ ಚಾಲನೆಯಿಂದ ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಕಾರು ಬಿದ್ದ ಮಂಗಳೂರು ಹೊರವಲಯದ ಗುರುಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಅಕ್ಟೋಬರ್ 15 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಂಗಳೂರು ನಗರ ಹೊರವಲಯದ ಗುರುಪುರ ಬಳಿ ಅತೀ ವೇಗವಾಗಿ ಬಂದ ಕಾರು, ಚಾಲಕ ಮಹಮ್ಮದ್ ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿ ಬಿದ್ದಿದೆ .

ಬಂಟ್ವಾಳದ ಕೈಕಂಬ ಜೋಡುಮಾರ್ಗ ನಿವಾಸಿ ಮಹಮ್ಮದ್  ಹಾಗೂ ಕಾರಿನಲ್ಲಿದ್ದವರೊಂದಿಗೆ  ಹೊಂಡಕ್ಕಿಳಿದರೂ ಅಪಾಯದಿಂದ ಪಾರಾಗಿದ್ದರು.

ಆರೋಪಿ ಮಹಮ್ಮದ್ ಮೇಲೆ ಅತೀ ವೇಗ ಮತ್ತು  ನಿರ್ಲಕ್ಷ್ಯದ ಕೇಸ್ ದಾಖಲಿಸಿದ ಸಂಚಾರಿ ಪೊಲೀಸರು, 3 ಸಾವಿರ ದಂಡ ಕಕ್ಕಿಸಿದ್ದಾರೆ.

https://www.facebook.com/reel/842159471243131/?s=single_unit&__cft__[0]=AZVzlcRfiu6L7ciL9-NUTXiCAqlZsRlvjCWTCI3oElb4bRYms28pNB-_ZBLLCXESauy_1NZJD9-gkr9p3P8rYp7RN378CUf_i4oKuWraKsuYPo1zIwxFlroaU0dOraxlEZR835E_04JZGWER3a8XNxYqGBrZxrBH4EPyU9VhDx4QXmVUQ3iaT9NHnw2OBOZdlxQ&__tn__=H-R

Share Information
Continue Reading
Advertisement
Click to comment

Leave a Reply

Your email address will not be published. Required fields are marked *