Connect with us

    LATEST NEWS

    ಐದು ತಿಂಗಳಿಗೆ ಮಂಗಳೂರು ನೂತನ ಮೇಯರ್ ಆಗಿ ಮನೋಜ್ ಕುಮಾರ್ ಉಪಮೇಯರ್ ಆಗಿ ಭಾನುಮತಿ ಪಿ.ಎಸ್ ಆಯ್ಕೆ

    ಮಂಗಳೂರು ಸೆಪ್ಟೆಂಬರ್ 19: ಮಂಗಳೂರು ನೂತನ ಮೇಯರ್ ಆಗಿ ಮನೋಜ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಆಗಿ ಭಾನುಮತಿ ಪಿ.ಎಸ್ ಆಯ್ಕೆಯಾಗಿದ್ದಾರೆ.


    ‌ಪರಿಶಿಷ್ಟ ಜಾತಿಗೆ ಮೀಸಲಿದ್ದ ಮೇಯರ್ ಹುದ್ದೆಗೆ ಬಿಜೆಪಿ ಸದಸ್ಯ ಮನೋಜ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ನಲ್ಲಿ ಪರಿಶಿಷ್ಟ ಜಾತಿಯ ಯಾವುದೇ ಸದಸ್ಯರಿಲ್ಲ. ಹಾಗಾಗಿ ಕಾಂಗ್ರೆಸ್ನಿಂದ ಯಾವುದೇ ನಾಮಪತ್ರ ಸಲ್ಲಿಕೆ ಆಗಿರಲಿಲ್ಲ‌. ಹಾಗಾಗಿ ಬಿಜೆಪಿಯ ಮನೋಜ್ ಕುಮಾರ್ ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ.   ಉಪ ಮೇಯರ್ ಹುದ್ದೆಗೆ ಕಾಂಗ್ರೆಸ್ ನ ಜೀನತ್ ಶಂಸುದ್ದೀನ್, ಬಿಜೆಪಿಯ ಭಾನುಮತಿ ಪಿ.ಎಸ್ ಹಾಗೂ ವನಿತಾ ಪ್ರಸಾದ್ ನಾಮಪತ್ರ ಸಲ್ಲಿಸಿದ್ದರು. ಮೂವರ ನಾಮಪತ್ರಗಳು ಕ್ರಮಬದ್ಧವಾಗಿದ್ದವು. ವನಿತಾ ಪ್ರಸಾದ್ ನಾಮಪತ್ರ ಹಿಂಪಡೆದರು


    ಜೀನತ್ ಸಂಶುದ್ದೀನ್ ಪರ ಕಾಂಗ್ರೆಸ್ ನ 14 ಸದಸ್ಯರು ಹಾಗಿ ಬಿಜೆಪಿಯ 47 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು‌. ಭಾನುಮತಿ ಅವರ ಪರವಾಗಿ ಬಿಜೆಪಿಯ 47, ವಿರುದ್ಧವಾಗಿ ಕಾಂಗ್ರೆಸ್ ನ 14 ಸದಸ್ಯರು ಮತ ಚಲಾಯಿಸಿದರು. ಎಸ್ಡಿಪಿಐ ಸದಸ್ಯೆ ತಟಸ್ಥವಾಗಿ ಉಳಿದರು. ಅತಿಹೆಚ್ಚು ಮತ ಪಡೆದ ಭಾನುಮತಿ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಟಿಸಿದರು. ಪೆಬ್ರವರಿಯಲ್ಲಿ ಮಹಾನಗರಪಾಲಿಕೆಯ ಅವಧಿ ಮುಗಿಯಲಿದ್ದು, ಕೇವಲ ಐದೂವರೆ ತಿಂಗಳಿಗೆ ನೂತನ ಮೇಯರ್ ಹಾಗೂ ಉಪಮೇಯರ್ ಆಯ್ಕೆ ನಡೆದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply