Connect with us

DAKSHINA KANNADA

ಮಂಗಳೂರು : ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ; ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು

ಮಂಗಳೂರು, ಜುಲೈ 03: ನಗರದ ಬಲ್ಮಠ ರೋಡ್ ಸಮೀಪ ಗುಡ್ಡ ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ  ನಡೆದಿದೆ. ಬಿಹಾರ ಮೂಲದ ರಾಜ್ ಕುಮಾರ್ (18) ಮತ್ತು ಉತ್ತರ ಪ್ರದೇಶ ಮೂಲದ ಚಂದನ್‌ ಕುಮಾರ್‌ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕರಾಗಿದ್ದಾರೆ. ಕಟ್ಟಡ ನಿರ್ಮಾಣಕ್ಕಾಗಿ ನ ಅಡಿಪಾಯ ಹಾಗೂ ತಡೆಗೋಡೆ ನಿರ್ಮಾಣ ಕಾರ್ಯದ ವೇಳೆ ಈ ದುರ್ಘಟನೆ ಸಂಭವಿಸಿದೆ. ನಿರ್ಮಾಣ ಕಾಮಗಾರಿಯ ಒಂದು ಪಾರ್ಶ್ವದಲ್ಲಿ ಈ ಇಬ್ಬರೂ ಕಾರ್ಮಿಕರು ತಳಪಾಯದ ಗೋಡೆಗೆ ವಾಟರ್‌ ಪ್ರೂಫಿಂಗ್ ರಾಸಾಯನಿಕ ಸಿಂಪಡಿಸುತ್ತಿದ್ದ ವೇಳೆ ಆ ಭಾಗದ ಮೇಲ್ಭಾಗದಿಂದ ಭೂ ಕುಸಿತ ಉಂಟಾಗಿ ಅಲ್ಲಿ ಕಟ್ಟಲಾಗಿದ್ದ ತರ್ಪಾಲ್ ಮೇಲೆ ಬಿದ್ದು ಇಬ್ಬರೂ ಮಣ್ಣಿನಡಿ ಸಿಲುಕಿದ್ದರು.‌  ಕೂಡಲೇ ಕಾರ್ಯಾಚರಣೆ ನಡೆಸಿ ರಾಜ್ ಕುಮಾರ್ ನನ್ನು ಮಣ್ಣಿ ನಡಿ ಯಿಂದ ರಕ್ಷಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದ್ದು ಸ್ಥಳದಲ್ಲಿ ಎನ್ ಡಿಆರ್ ಎಫ್, ಅಗ್ನಿ ಶಾಮಕ ದಳ ಹಾಗೂ ಪೋಲಿಸರಿಂದ ಮಣ್ಣಿನಡಿ ಸಿಲುಕಿರುವ ಚಂದನ್‌ ಕುಮಾರ್‌ ನ ರಕ್ಷಣಾ ಕಾರ್ಯ ನಡೆಯುತ್ತಿದೆ.

ಇದನ್ನು ಓದಿ..

ಮಂಗಳೂರು : ಮಣ್ಣು ಕುಸಿತದಲ್ಲಿ ಕಾರ್ಮಿಕರಿಬ್ಬರ ಜೀವನ್ಮರಣ ಹೋರಾಟ, ಬಿಲ್ಡರ್ – ಜಿಲ್ಲಾಡಳಿತದ ಪ್ರಜ್ಞಾಪೂರ್ವಕ ನಿರ್ಲಕ್ಷ್ಯವೇ ಕಾರಣ  ಪರಿಹಾರಕ್ಕೆ ಕಟ್ಟಡ ಕಾರ್ಮಿಕರ ಸಂಘಟನೆ ಆಗ್ರಹ

Share Information
Continue Reading
Advertisement
Click to comment

Leave a Reply

Your email address will not be published. Required fields are marked *