DAKSHINA KANNADA
ಜನಸಂಘ, ಬಿಜೆಪಿಯ ಹಿರಿಯ ಮುತ್ಸದ್ದಿ ಕಾಳಪ್ಪ ಕುಕ್ಯಾನ್ ನಿಧನ
ಮಂಗಳೂರು : ಜನಸಂಘದ ನಿಷ್ಟವಂತ ಕಾರ್ಯಕರ್ತ , ಬಿಜೆಪಿಯ ಹಿರಿಯ ಮುತ್ಸದ್ದಿ ಕಾಳಪ್ಪ ಕುಕ್ಯಾನ್ ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಿಧನರಾಗಿದ್ದಾರೆ.
ಕಾಳಪ್ಪ ಕುಕ್ಯಾನ್ ಸುರತ್ಕಲ್ ಭಾ ರತೀಯ ಜನತಾ ಪಾರ್ಟಿಯ ಹಿರಿಯ ಮುತ್ಸದ್ದಿ ಹಾಗೂ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆಮನೆಯನ್ನು ಅನುಭವಿಸಿದವರು ಆಗಿದ್ದಾರೆ. ಸುರತ್ಕಲ್ ಭಾರತೀಯ ಜನತಾ ಪಾರ್ಟಿಯ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಆಗಲುವಿಕೆ ರಾಜಕೀಯ ವಲಯಕ್ಕೆ ತುಂಬಲಾರದ ನಷ್ಟವಾಗಿದೆ. ಹಲವು ರಾಜಕೀಯ ನಾಯಕರು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಸಂತಾಪ:
ಕುಕ್ಯಾನ್ ನಿಧನಕ್ಕೆ ಮಾಜಿ ಸಂಸದ ಹಾಕೂ ಬಿಜೆಪಿ ರಾಜ್ಯಾಧ್ಯಕ್ಷಾರ ನಳಿನ್ ಕುಮಾರ್ ಕಟೀಲ್ ಅವರು ಸಂತಾಪ ವ್ಯಕ್ತಪಡಿಸಿದ್ದು “ಜನಸಂಘ ಮತ್ತು ಭಾಜಪಾದ ಹಿರಿಯ ಮುಖಂಡರೂ, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಡಿ ಸೆರೆವಾಸ ಅನುಭವಿಸಿದ ಧೀಮಂತ ನಾಯಕರಾದ ಶ್ರೀ ಕಾಳಪ್ಪ ಕುಕ್ಯಾನ್ ಸುರತ್ಕಲ್ ಇವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಕುಟುಂಬಕ್ಕೆ, ಬಂಧು ಮಿತ್ರರಿಗೆ, ಹಿತೈಷಿಗಳಿಗೆ ಈ ದು:ಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.
You must be logged in to post a comment Login