Connect with us

LATEST NEWS

ಕೊರಗಜ್ಜನ ಕೊಲ ನಡೆಯುತ್ತಿದ್ದ ಸಂದರ್ಭ ಪೊಲೀಸ್ ಜೀಪ್ ಗೆ ಕಲ್ಲೆಸೆದ ಆರೋಪಿಗೆ ಬಿತ್ತು ಧರ್ಮದೇಟು…!!

ಮಂಗಳೂರು ಎಪ್ರಿಲ್ 11: ನಶೆಯಲ್ಲಿದ್ದ ವ್ಯಕ್ತಿಯೊಬ್ಬ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಸ್ವಾಮಿ ಕೊರಗಜ್ಜನ ಕೋಲ ನಡೆಯುತ್ತಿದ್ದ ವೇಳೆ ಜನರ ಗುಂಪಿನೆಡೆ ಕಲ್ಲು ತೂರಿದ ಹಿನ್ನಲೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.


ಬಂಧಿತ ಆರೋಪಿಗಳನ್ನು ಉಳ್ಳಾಲದ ಮುಹಮ್ಮದ್ ಹಫೀಜ್ ಎಂದು ಗುರುತಿಸಲಾಗಿದೆ. ಈತ ಮಧ್ಯದ ನಶೆಯಲ್ಲಿ ಇದ್ದ ಎಂದು ಹೇಳಲಾಗಿದೆ. ತೊಕ್ಕೊಟ್ಟು ಸ್ವಾಮಿ ಕೊರಗಜ್ಜ ಸೇವಾ ಸಮಿತಿಯು ವಾರ್ಷಿಕ ಕೋಲವನ್ನು ಆಯೋಜಿಸಲಾಗಿತ್ತು. ಕೋಲದ ಬಳಿಕ ಅಗೆಲು ಪ್ರಸಾದವನ್ನು ವಿತರಿಸುತ್ತಿದ್ದಾಗ, ಹಫೀಜ್ ಹತ್ತಿರದ ಛಾವಣಿಯ ಮೇಲಿಂದ ಗುಂಪಿನ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದ್ದಾನೆ.

 

ಉಳ್ಳಾಲ ಪೊಲೀಸ್‌ ಠಾಣೆಯ ವಾಹನದ ಮೇಲೂ ಒಂದು ಕಲ್ಲು ಬಿದ್ದಿದೆ. ಕೂಡಲೇ ಭಕ್ತರ ಗುಂಪೊಂದು ಆ ವ್ಯಕ್ತಿ ಇದ್ದ ಸ್ಥಳಕ್ಕೆ ಹೋಗಿ ಆತನನ್ನು ಕೆಳ ಕರೆತಂದು ಥಳಿಸಿ, ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *