Connect with us

    DAKSHINA KANNADA

    ಉದನೆ ತೂಗು ಸೇತುವೆ ಬಳಿ ವ್ಯಕ್ತಿಯೊಬ್ಬರ ಬ್ಯಾಗ್ ಚಪ್ಪಲಿ ಪತ್ತೆ – ನದಿಗೆ ಹಾರಿರುವ ಶಂಕೆ..!!

    ಪುತ್ತೂರು ಸೆಪ್ಟೆಂಬರ್ 18: ಉದನೆ ತೂಗುಸೇತುವೆಯಲ್ಲಿ ವಕ್ತಿಯೊಬ್ಬರ ಬ್ಯಾಗ್ ಹಾಗೂ ಚಪ್ಪಲಿ ಪತ್ತೆಯಾಗಿದ್ದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.


    ಸೇತುವೆ ಬಳಿ ಬಿಟ್ಟಿರುವ ಬ್ಯಾಗ್ ನಲ್ಲಿ ಡ್ರೈವಿಂಗ್ ಲೈಸನ್ಸ್ ಪತ್ತೆಯಾಗಿದ್ದು ಅದರಲ್ಲಿ ರಮಣ, ತಂದೆ ಹೆಸರು: ಸುಬ್ರಹ್ಮಣ್ಯಂ, ಊರು: ಪುಟ್ಟಪರ್ತಿ ಎಂದಿದೆ. ಅಲ್ಲದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಂದು ಬರೆದಿದ್ದ ಡೆತ್‌ನೋಟ್ ಸಹ ಪತ್ತೆಯಾಗಿದೆ. ಸೆಪ್ಟೆಂಬರ್ 15ರಂದು ಧರ್ಮಸ್ಥಳದಿಂದ ಉದನೆಗೆ ಬಸ್ಸಿನಲ್ಲಿ ಪ್ರಯಾಣಿಸಿರುವ ಬಸ್ ಟಿಕೆಟ್ ಸಹ ಪತ್ತೆಯಾಗಿದೆ. ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply