DAKSHINA KANNADA
ಕಾಸರಗೋಡು – ತೊಳೆಯುತ್ತಿದ್ದ ವೇಳೆ ಪಲ್ಟಿಯಾದ ಹಿಟಾಚಿ – ಯುವಕ ಸಾವು
ಕಾಸರಗೋಡು ಜೂನ್ 25: ಮನೆಯ ಅಂಗಳದಲ್ಲಿ ಹಿಟಾಚಿ ತೊಳೆಯುವ ವೇಳೆ ಪಲ್ಟಿಯಾಗಿ ಯುವಕನೊಬ್ಬ ಸಾವನಪ್ಪಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಮೃತ ಯುವಕನನ್ನು ಕಾಸರಗೋಡು ಮಹಿಳಾ ಕಾಂಗ್ರೇಸ್ ನ ಜಿಲ್ಲಾಧ್ಯಕ್ಷೆ ಮಿನಿ ಚಂದ್ರನ್ ಅವರ ಪುತ್ರ ಪ್ರೀತಂ ಲಾಲ್ ಚಂದ್ ಎಂದು ಗುರುತಿಸಲಾಗಿದೆ. ಅವರಿಗೆ 23 ವರ್ಷ. ಮಂಗಳವಾರ ಬೆಳಗ್ಗೆ ಪ್ರೀತಂ ಲಾಲ್ ತನ್ನ ಅಜ್ಜಿಯ ಮನೆಯಲ್ಲಿ ಹಿಟಾಟಿಯನ್ನು ತೊಳೆಯುತ್ತಿದ್ದಾಗ ಯಂತ್ರ ಪಲ್ಟಿಯಾಗಿದೆ. ಈ ವೇಳೆ ಪ್ರೀತಂ ಹಿಟಾಚಿ ಅಡಿ ಸಿಕ್ಕಿ ಬಿದ್ದಿದ್ದಾನೆ. ಹಿಟಾಚಿಯನ್ನು ಮೇಲೆತ್ತಿ ಅವನನ್ನು ಹೊರತೆಗೆಯಲು ನಮಗೆ ಬಹಳ ಸಮಯ ಹಿಡಿದಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋದರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.
ಪ್ರೀತಂ ಲಾಲ್ ಚಂದ್ ತನ್ನ ಸಹೋದರ ಗೌತಮ್ ಲಾಲ್ ಅವರ ಹಿಟಾಚಿ ಯಂತ್ರದ ಕೆಲಸದಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಬಗ್ಗೆ ಬೇಡಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login