Connect with us

    KARNATAKA

    ಮಡಿಕೇರಿ : ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಫರ್ಶಕ್ಕೆ 6 ದನ ಕರುಗಳು ಮೃತ್ಯು..!

    ಮಡಿಕೇರಿ : ತುಂಡಾಗಿ ಬಿದ್ದಿದ್ದ  ವಿದ್ಯುತ್ ತಂತಿ ಸ್ಪರ್ಶಕ್ಕೆ ಆರು ಜಾನುವಾರುಗಳು ದಾರುಣ ಅಂತ್ಯ ಕಂಡ ಘಟನೆ ಕೊಡಗಿನ ಪೊನ್ನಂಪೇಟೆಯಲ್ಲಿ ನಡೆದಿದೆ.

    ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು ಪರಿಣಾಮ  ಪೊನ್ನಂಪೇಟೆ ತಾಲೂಕು ತೆರಾಲು ಗ್ರಾಮದಲ್ಲಿ 11 ಕೆವಿಯ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು.  ಈ ತಂತಿಯನ್ನು ಸ್ಪರ್ಶಿಸಿದ್ದ  6  ದನಕರುಗಳು ಕರೆಂಟ್ ಶಾಕಿಗೆ  ಸ್ಥಳದಲ್ಲೇ ಬಲಿಯಾಗಿವೆ.  ಇವು ಪೊನ್ನಂಪೇಟೆ ತಾಲೂಕು ತೆರಾಲು ಗ್ರಾಮದ ರೈತ ಬೊಜ್ಜoಗಡ ನಟರಾಜ್ ಅವರಿಗೆ ಸೇರಿದ ಜಾನುವಾರುಗಳಿದ್ದುವು. ದನಕರುಗಳು ಕೊಟ್ಟಿಗೆಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.  ಕಂದಾಯ ಇಲಾಖೆ ಅಧಿಕಾರಿಗಳು.ಹಾಗೂ ವಿದ್ಯುತ್ ಸರಬರಾಜು ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply