Connect with us

LATEST NEWS

ಪ್ರೀತಿಸುತ್ತಿದ್ದ ಯುವತಿಗೆ ಇರಿದು ತಾನು ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ

ಪ್ರೀತಿಸುತ್ತಿದ್ದ ಯುವತಿಗೆ ಇರಿದು ತಾನು ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ

ಮಂಗಳೂರು ಜೂನ್ 28: ಏಕ ಮುಖ ಪ್ರೀತಿ ಹಿನ್ನಲೆಯಲ್ಲಿ ಪಾಗಲ್ ಪ್ರೇಮಿಯೊಬ್ಬ ಸಂಜೆ ಸಾರ್ವಜನಿಕರ ಎದುರೇ ತಾನು ಪ್ರೀತಿಸಿದ ಯುವತಿಗೆ ಚಾಕುವಿನಿಂದ ಇರಿದು ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಯತ್ನಿಸಿದ ಘಟನ ಉಳ್ಳಾಲದಲ್ಲಿ ನಡೆದಿದೆ.

ಯುವತಿಯನ್ನು ಉಳ್ಳಾಲದ ಬಗಂಬಿಲದ ನಿವಾಸಿ 20 ವರ್ಷ ಪ್ರಾಯದ ದೀಕ್ಷಾ ಎಂದು ಗುರುತಿಸಲಾಗಿದ್ದು ಆರೋಪಿ ಸುಶಾಂತ್ ಮಂಗಳೂರು ಶಕ್ತಿನಗರ ನಿವಾಸಿ ಎಂದು ತಿಳಿದು ಬಂದಿದೆ.

ಈ ಘಟನೆಗೆ ಎಕಮುಖ ಪ್ರೀತಿಯೇ ಕಾರಣ ಎಂದು ಹೇಳಲಾಗಿದ್ದು, ಸುಶಾಂತ್ ದೀಕ್ಷಾಳನ್ನು ಪ್ರೀತಿಸುತ್ತಿದ್ದ ಎಂದು ಹೇಳಲಾಗಿದ್ದು, ಆದರೆ ದೀಕ್ಷಾ ಈ ಪ್ರೀತಿಗೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ ಇಂದು ಸಂಜೆ ಬಂಗಬಿಲದ ದೀಕ್ಷಾಳ ಮನೆ ಸಮೀಪ ಹೋಗಿ ಸುಶಾಂತ್ ಚಾಕುವಿನಿಂದ ಇರಿದಿದ್ದಾನೆ,ನಂತರ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಪ್ರಯತ್ನಿಸಿದ್ದಾನೆ.

ಇಬ್ಬರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

VIDEO

https://youtu.be/wCmnYBFN-3k

Share Information
Continue Reading
Advertisement
Click to comment

Leave a Reply

Your email address will not be published. Required fields are marked *