Connect with us

LATEST NEWS

ಬಾವಿಗೆ ಬಡಿದ ಸಿಡಿಲು ಆವರಣಗೋಡೆ ಛಿದ್ರ…!!

ಬಾವಿಗೆ ಬಡಿದ ಸಿಡಿಲು ಆವರಣಗೋಡೆ ಛಿದ್ರ…!!

ಉಡುಪಿ ಜೂ.1: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಉಡುಪಿ ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದೆ.
ನಿನ್ನೆ ರಾತ್ರಿ ಸಿಡಿಲು ಸಹಿತ ಸುರಿದಿದ್ದ ಧಾರಾಕಾರ ಮಳೆ ಹಾಗೂ ಸಿಡಿಲಿಗೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಹಲವು ಬೃಹತ್ ಗಾತ್ರದ ಮರಗಳು ಧರೆಗುರುಳಿವೆ.

ಬ್ರಹ್ಮಾವರ ಸಮೀಪದ ಮಟಪಾಡಿ ನಿವಾಸಿ  ಸ್ಟಾಲಿನ್ ಸಿಕ್ವೇರ ಎಂಬವರ ಬಾವಿಗೆ ಸಿಡಿಲು ಬಡಿದು ಬಾವಿಯ ಆವರಣ ಗೋಡೆ ಛಿದ್ರಗೊಂಡಿದೆ. ಮಳೆಯಿಂದಾಗಿ ಮರಗಳು ಧರೆಗುರುಳಿದ್ದು, ಈ ಭಾಗದ  ನೂರಾರು ಮನೆಗಳಲ್ಲಿ ವಿದ್ಯುತ್ ಸಂಚಾರ ವ್ಯತ್ಯಯ ಉಂಟಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *