DAKSHINA KANNADA
ಪುತ್ತೂರು – ಬೇರಿಕೆಯಲ್ಲಿ ರಸ್ತೆಗೆ ಕುಸಿದ ಗುಡ್ಡ – ಮುರ-ಕಡಂಬು ರಸ್ತೆ ಸಂಪರ್ಕ ಕಡಿತ
ಪುತ್ತೂರು ಅಗಸ್ಟ್ 2: ಪುತ್ತೂರಿನಲ್ಲಿ ಭಾರೀ ಪ್ರಮಾಣದ ಭೂಕುಸಿತದ ಬಗ್ಗೆ ವರದಿಯಾಗುತ್ತಿದ್ದು, ಇದೀಗ ಭಾರೀ ಆತಂಕಕ್ಕೆ ಕಾರಣವಾಗಿದೆ. ಮಾಣಿ ಮೈಸೂರು ರಸ್ತೆಯಲ್ಲಿ ಭೂಕುಸಿತದ ಬಳಿಕ ಇದೀಗ ಪಡ್ನೂರಿನ ಬೇರಿಕೆ ಎಂಬಲ್ಲಿ ಭಾರೀ ಪ್ರಮಾಣದ ಗುಡ್ಡದ ಮಣ್ಣು ರಸ್ತೆಗೆ ಹರಿದು ಬಂದಿದೆ.
ಪುತ್ತೂರು ತಾಲೂಕಿನ ಬೇರಿಕೆ ಎಂಬಲ್ಲಿ ಈ ಘಟನೆ ನಡೆದಿದ್ದು. ಇಡೀ ಗುಡ್ಡವೇ ರಸ್ತೆಗೆ ಕುಸಿದ ಹಿನ್ನಲೆಯಲ್ಲಿ ರಸ್ತೆ ಸಂಪರ್ಕ ಕಡಿತವಾಗಿದೆ. ಹೆಚ್ಚಾಗಿ ವಾಹನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಇನ್ನೂ ಗುಡ್ಡ ಭಾಗದಿಂದ ಹರಿಯುತ್ತಿರುವ ಕೆಸರು ಮಿಶ್ರಿತ ನೀರು ಹರಿಯುತ್ತಿರುವ ಕಾರಣ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
You must be logged in to post a comment Login