DAKSHINA KANNADA
ರಿಂಗ್ ಬಾವಿ ಕಾಮಗಾರಿ ವೇಳೆ ಕುಸಿದ ಮಣ್ಣು – ಕಾರ್ಮಿಕ ಕೂದಲೆಳೆ ಅಂತರದಲ್ಲಿ ಪಾರು
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಸುಳ್ಯ ಜೂನ್ 30 : ರಿಂಗ್ ಬಾವಿ ಸುತ್ತ ಮಣ್ಮು ತುಂಬಿಸುವ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕಾರ್ಮಿಕನೊಬ್ಬ ಮಣ್ಣಿನಡಿ ಸಿಲುಕಿದ ಘಟನೆ ಶನಿವಾರ ಸಂಜೆ ಪಂಜದಲ್ಲಿ ನಡೆಯಿತು.
ಅಡ್ಡತ್ತೋಡು ಸಮೀಪ ಮನೆಯೊಂದರ ಬಾವಿಗೆ ಹಾಕಿದ್ದ ರಿಂಗ್ಗೆ ಕೇರಳದ ಕಾರ್ಮಿಕರು ಮಣ್ಣು ತುಂಬುವ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ರಿಂಗ್ನ ಬದಿಯ ಮಣ್ಣು ದಿಢೀರ್ ಕೆಳಕ್ಕೆ ಕುಸಿದು ಓರ್ವ ಕಾರ್ಮಿಕನ ದೇಹ ಮಣ್ಣಿನಲ್ಲಿ ಹೂತು ಹೋಗುತ್ತಿತ್ತು. ಕುತ್ತಿಗೆಯ ಭಾಗ ಮೇಲೆ ಉಳಿದಿದ್ದರಿಂದ ತಕ್ಷಣ ಸ್ಥಳದಲ್ಲಿದ್ದವರು ಜೆಸಿಬಿ ಸಹಾಯದಿಂದ ಕಾರ್ಮಿಕನನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.
ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆತಂದು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
You must be logged in to post a comment Login