Connect with us

LATEST NEWS

ಮಂಗಳೂರು ಡೊಂಗರಕೇರಿನಲ್ಲಿ ದೈತ್ಯ ಹೆಬ್ಬಾವನ್ನು ಸೆರೆ ಹಿಡಿದ ಲಕ್ಷ್ಮೀ ಕಾಮತ್..!

ಮಂಗಳೂರು : ಮಂಗಳೂರು ನಗರದ ಡೊಂಗರಕೇರಿ ಕಟ್ಟೆಮಾರ್ ಬಳಿ ಕಾಣಸಿಕ್ಕಿದ ಬೃಹತ್ ಹೆಬ್ಬಾವೊಂದನ್ನು ರಕ್ಷಣೆ ಮಾಡಲಾಗಿದೆ.

ಡೊಂಗರಕೇರಿಯ ಕಟ್ಟೆಮಾರ್ ಬಳಿ ಬುಧವಾರ ತಡರಾತ್ರಿ ಈ ಹೆಬ್ಬಾವು ಕಾಣಸಿಕ್ಕಿದ್ದು ಮಾಹಿತಿ ಪಡೆದ ಲಕ್ಷ್ಮೀ ಕಾಮತ್ ಅವರು ಸ್ಥಳಿಯರ ನೆರವಿನಿಂದ ಹೆಬ್ಬಾವನ್ನು ಸೆರೆ ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡಲಾಗಿದೆ.

ಮಂಗಳೂರು ನಗರದಲ್ಲಿ ಹೆಬ್ಬಾವುಗಳ ಸಂತತಿ ಹೆಚ್ಚಾಗಿದ್ದು ಮಳೆಗಾಲದಲ್ಲಿ ಹೆಚ್ಚಾಗಿ ಆಹಾರ ಅರಸಿ ಜನವಸತಿ ಇರುವ ಪ್ರದೇಶಗಳಿಗೆ ಬರುತ್ತಿರುತ್ತವೆ. ಹಗಲಿಗಿಂತ ರಾತ್ರಿ ಸಮಯ ಹೆಬ್ಬಾವುಗಳು ಆಹಾರ ಅರಸಿ ಹೋಗುತ್ತಿರುವುದು ಸಾಮಾನ್ಯವಾಗಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *