Connect with us

DAKSHINA KANNADA

ಅಡ್ಯನಡ್ಕ್ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ – ಮೂವರು ಆರೋಪಿಗಳು ಅರೆಸ್ಟ್

ಪುತ್ತೂರು ಮಾರ್ಚ್ 11: ವಿಟ್ಲದ ಅಡ್ಯನಡ್ಕದಲ್ಲಿರುವ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ದಕ್ಷಿಣಕನ್ನಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ.


ಬಂಧಿತರನ್ನು ಬಂಟ್ವಾಳ ಗೂಡಿನಬಳಿಯ ರಫೀಕ್(35), ಕಾಸರಗೋಡಿನ ಉಪ್ಪಳ ನಿವಾಸಿ ಖಲಂದರ್ (41), ಉಪ್ಪಳ ಬಾಯಾರು ನಿವಾಸಿ ದಯಾನಂದ (37) ಎಂದು ಗುರುತಿಸಲಾಗಿದೆ. ಇನ್ನು ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಡ್ಯನಡ್ಕದಲ್ಲಿರುವ ಕರ್ಣಾಟಕ ಬ್ಯಾಂಕ್ ನಲ್ಲಿ ಫೆಬ್ರವರಿ 7 ರಂದು ದರೋಡೆ ನಡೆದಿತ್ತು. ಆರೋಪಿಗಳು ಬ್ಯಾಂಕಿನ ಹಿಂದಿನ‌ ಕಿಟಕಿ ಮುರಿದು ಬ್ಯಾಂಕ್ ಒಳಗೆ ನುಗ್ಗಿ ಬ್ಯಾಂಕಿನೊಳಗಿನ ಲಾಕರ್ ರನ್ನು ಗ್ಯಾಸ್ ಕಟ್ಟರ್ ಬಳಸಿ ಒಡೆದು ಕೋಟ್ಯಾಂತರ ಮೌಲ್ಯದ ಚಿನ್ನ ಹಾಗೂ ನಗದು ಕಳ್ಳತನಮಾಡಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಕಲಂದರ್ ಮತ್ತು‌ ಗೂಡಿನಬಳಿ ರಫೀಕ್ ಹಲವು ಕಳ್ಳತನ,ದರೋಡೆ ಪ್ರಕರಣ ಆರೋಪಿಗಳು, ಆದರೆ ದಯಾನಂದ ಇದೇ ಮೊದಲ ಬಾರಿಗೆ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದು, ಹಣದ ಆಸೆಗಾಗಿ ಕಳ್ಳತನಕ್ಕೆ ಇಳಿದಿದ್ದ  ದಯಾನಂದ, ಬ್ಯಾಂಕಿನೊಳಗಿನ ಲಾಕರ್ ರನ್ನು ಗ್ಯಾಸ್ ಕಟ್ಟರ್ ಬಳಸಿ ಒಡೆದು ಬ್ಯಾಂಕಿನೊಳಗಿಂದ ಕೋಟ್ಯಾಂತರ ಮೌಲ್ಯದ ಚಿನ್ನ ಮತ್ತು ಹಣ ಲಪಟಾಯಿಸಿದ್ದಾರೆ. ಸದ್ಯ ಆರೋಪಿಗಳಿಂದ ದರೋಡೆಯಾದ ಸೊತ್ತುಗಳನ್ನು ರಿಕವರಿ ಮಾಡುವ ಪ್ರಕ್ರಿಯೆಯಲ್ಲಿ ಪೋಲೀಸರು ತೊಡಗಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *