Connect with us

LATEST NEWS

ಕಾರ್ಕಳ : ಮೊಬೈಲ್‌ ರಿಪೇರಿ ಮಾಡಿಸಿ ಬರುವುದಾಗಿ ಹೇಳಿ ಹೋದವರು ಎಲ್ಲಿ ಹೋದ್ರು..!!?

ಕಾರ್ಕಳ : ಮೊಬೈಲ್‌ ರಿಪೇರಿ ಮಾಡಿಸಿ  ಬರುವುದಾಗಿ ಹೇಳಿ ಮನೆಯಿಂದ ಹೊರಟ ವ್ಯಕ್ತಿ ಮರಳಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಉಡುಪಿ ಜಿಲ್ಲೆ ಕಾರ್ಕಳ ಕಸಬಾ ಗ್ರಾಮದಲ್ಲಿ ನಡೆದಿದೆ.

ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ  ಈ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ.ಇಲ್ಲಿನ ಕಸಬಾ ಗ್ರಾಮದ ನಿವಾಸಿ ರತ್ನಾಕರ (52) ಎಂಬವರು ಅಕ್ಟೋಬರ್ 22ರಂದು ಸಂಜೆ  7 ಗಂಟೆ ಸುಮಾರಿಗೆ ಮೊಬೈಲ್‌ ರಿಪೇರಿ  ಮಾಡಿಸಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದರು . ಆದ್ರೆ ರಾತ್ರಿಯಾದ್ರೂ  ವಾಪಾಸು ಮನೆಗೆ ಬಾರದೆ ರತ್ನಾಕರ ಅವರು ಏಕಾಏಕಿ ಕಾಣೆಯಾಗಿದ್ದು ಈ ಸಂಬಂಧ  ರತ್ನಾಕರ ಪತ್ನಿ ಪ್ರೇಮ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂತ ಅಲೋಶಿಯಸ್ ಕಾಲೇಜು ಎದುರು ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಂದ ಭಜನೆ..!!

Share Information
Continue Reading
Advertisement
Click to comment

Leave a Reply

Your email address will not be published. Required fields are marked *