Connect with us

LATEST NEWS

ನಾನು ಕಾಲ್ ಮಾಡಿದರೆ ರಾಂಗ್ ನಂಬರ್ ಅಂತ್ ಕಟ್ ಮಾಡಿದ್ದಾರೆ ವಿಧ್ಯಾರ್ಥಿನಿಯರು – ಯು.ಟಿ ಖಾದರ್

ಮಂಗಳೂರು ಮೇ 31: ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಬ್ ಗೆ ಪಟ್ಟು ಹಿಡಿದಿರುವ ವಿಧ್ಯಾರ್ಥಿನಿಯರು ಶಾಸಕ ಖಾದರ್ ವಿರುದ್ದ ಮಾಡಿರುವ ಆರೋಪಕ್ಕೆ ಖಾದರ್ ತಿರುಗೇಟು ನೀಡಿದ್ದು, ವಿಧ್ಯಾರ್ಥಿನಿಯರ ಹೇಳಿಕೆಯ ಹಿನ್ನಲೆ ತಿಳಿದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.


ಮಂಗಳೂರಿನಲ್ಲಿ ಮಾತನಾಡಿದ ಅವರು ಯು.ಟಿ ಖಾದರ್ ಸರಿಯಾಗಿ ಸ್ಪಂದನೆ ನೀಡದೇ ಕೇವಲ ಕ್ರಿಕೆಟ್ ಆಟ ಆಡುತ್ತಿದ್ದಾ ಎಂಬ ವಿಧ್ಯಾರ್ಥಿನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನನಗೆ ಮಾಹಿತಿ ಬಂದಾಗ ನನ್ನಿಂದಾದ ನೆರವನ್ನು ನೀಡಿದ್ದೇನೆ. ಕುಲಪತಿ,ಜಿಲ್ಲಾಧಿಕಾರಿ ಜೊತೆ ಮಾತುಕತೆಗೆ ಅವರಿಗೆ ಸಹಾಯ ಮಾಡಿದ್ದೇನೆ. ವಿದ್ಯಾರ್ಥಿನಿಯರಿಗೆ ಕಾನೂನನ್ನು ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅವಕಾಶ ಇಲ್ಲ ಅಂತಾ ಕೂಡ ಅವರಿಗೆ ತಿಳಿ ಹೇಳಿದ್ದೇನೆ.

ಕಾನೂನು ಪ್ರಕಾರ ಹೋರಾಟ ಮಾಡಲು ಅವರಿಗೆ ಸೂಚಿಸಿದ್ದೇನೆ. ಆ ಬಳಿಕ ವಿದ್ಯಾರ್ಥಿನಿಯರು ಒಂದು ವಾರ ನನ್ನನ್ನು ಸಂಪರ್ಕವೇ ಮಾಡಿಲ್ಲ. ಆಮೇಲೆ ನಾನೇ ಕುಲಪತಿಗೆ ಫೋನ್ ಮಾಡಿ ಮಾತನಾಡಿದ್ದೇನೆ. ವಿದ್ಯಾರ್ಥಿನಿಯರಿಗೆ ಕಚೇರಿಯಿಂದ ಫೋನ್ ಮಾಡಿಸಿದ್ದೇನೆ. ನಾನೇ ಖುದ್ದು ಫೋನ್ ಮಾಡಿದ್ದಾಗ ರಾಂಗ್ ನಂಬರ್ ಅಂತಾ ಹೇಳಿ ಕಾಲ್ ಕಟ್ ಮಾಡಿದ್ದಾರೆ ಎಂದು ಬೇಸರ ಹೊರ ಹಾಕಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *