Connect with us

    DAKSHINA KANNADA

    ಹೊಸ ವರ್ಷಾಚರಣೆಗೆ ಬಂದವ ಹೆಣವಾದ!

    ಮಂಗಳೂರು, ಡಿಸೆಂಬರ್ 31 : ಸಾರ್ವಜನಕರಿಗೆ ಬೀಚ್ ಗೆ ಪ್ರವೇಶ ನಿಷೇಧಿಸಿದ್ದರು, ಇಯರ್ ಎಂಡ್ ಪಾರ್ಟಿ ಮತ್ತು ಹೊಸ ವರ್ಷಾಚರಣೆಗೆಂದು ಬಂದವ ನೀರುಪಾಲಾಗಿದ್ದಾನೆ. ವರ್ಷದ ಕೊನೇ ದಿನವಾದ ಗುರುವಾರ ಮಂಗಳೂರು ಹೊರವಲಯದ ಚಿತ್ರಾಪುರ ಕಡಲತೀರದಲ್ಲಿ ಈ ದುರ್ಘಟನೆ ಸಂಭವಿಸಿದೆ.

    ಕಡಬ ಮೂಲದ ಜಯರಾಮ್ ಗೌಡ (48) ಮೃತ. ಈತ ಸೇರಿ ಐವರ ತಂಡ ಇಯರ್ ಎಂಡ್ ಪಾರ್ಟಿ ಮಾಡಲು ಇಲ್ಲಿನ ಕೆರಿಬಿಯನ್ ಸೀ ಹೋಮ್ ರೆಸಾರ್ಟ್​ಗೆ ಬಂದಿತ್ತು.

    ಸಸಿಹಿತ್ಲು ಬೀಚ್ ಬಳಿ ನಿಷೇಧ ಇದ್ದ ಕಾರಣ ಚಿತ್ರಾಪು ಅಳಿವೆ ಬಾಗಿಲು ಬಳಿಯಿಂದ ಬೀಚ್​ಗೆ ಹೋಗಿದ್ದರು. ನೀರಲ್ಲಿ ಆಟವಾಡುವಾಗ ಐವರೂ ಅಪಾಯಕ್ಕೆ ಸಿಲುಕಿದ್ದರು. ಅವರ ರಕ್ಷಣೆಗೆ ಧಾವಿಸಿದ ಸರ್ಫರ್ ಶ್ಯಾಮ್ ಎಂಬುವವರು ನಾಲ್ವರ ಪ್ರಾಣ ಉಳಿಸಿದರು. ಅಷ್ಟರಲ್ಲಿ ಜಯರಾಮ್​ ಗೌಡ ಮೃತಪಟ್ಟಿದ್ದರು. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply