Connect with us

DAKSHINA KANNADA

ಕಬಕ – ಸ್ಕೂಟರ್ ಮತ್ತು ಟೂರಿಸ್ಟ್ ಬಸ್ ನಡುವೆ ಅಪಘಾತ- ಸ್ಕೂಟರ್ ಸವಾರ ಸಾವು

ಪುತ್ತೂರು ಫೆಬ್ರವರಿ 26: ಸ್ಕೂಟರ್ ಮತ್ತು ಟೂರಿಸ್ಟ್ ಬಸ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನಪ್ಪಿದ ಘಟನೆ ಕಬಕ ಸಮೀಪದ ಪೋಳ್ಯದಲ್ಲಿ ಫೆಬ್ರವರಿ 25 ರಂದು ರಾತ್ರಿ ನಡೆದಿದೆ. ಮೃತರನ್ನು ಸ್ಕೂಟರ್ ಸವಾರ ಮಾಸ್ಟರ್ ಪ್ಲಾನರಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ಅಳಕೆಮಜಲು ನಿವಾಸಿ ಕ್ಲೀಪರ್ಡ್ ಮೋರಸ್ ಅಲಿಯಾಸ್ ರಾಜ(45) ಎಂದು ಗುರುತಿಸಲಾಗಿದೆ.


ಸ್ಕೂಟರ್ ಸಹಸವಾರರಾದ ಬಿಹಾರ ಸುರೇಂದರ್(29) ಮತ್ತು ಸನ್ನೀಫ್(28) ಎಂಬವರು ಗಾಯಗೊಂಡಿದ್ದಾರೆ. ರಾತ್ರಿ ವೇಳೆ ಇಬ್ಬರು ಕಾರ್ಮಿಕರನ್ನು ಮುರದಲ್ಲಿ ರೂಮ್‌ಗೆ ಬಿಡಲೆಂದು ಸ್ಕೂಟರ್‌ನಲ್ಲಿ ಪುತ್ತೂರು ಕಡೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಾಜ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಕಬಕ ಸಮೀಪದ ಪೋಳ್ಯ ತಿರುವಿನಲ್ಲಿ ತುಲುಪುತ್ತಿದ್ದ ವಿರುದ್ಧ ಧಿಕ್ಕಿನಿಂದ ಮಡಿಕೇರಿಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಮಿನಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ.

 

ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ರಾಜ ಅವರ ತೊಡೆಯ ಮೇಲೆಯೇ ಬಸ್ ಹರಿದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *