Connect with us

LATEST NEWS

ಕನ್ನಡಿಗರನ್ನು ಬಿಟ್ಟು ಉತ್ತರ ಪ್ರದೇಶದ ಕಾರ್ಮಿಕರಿಗೆ ಮಣೆ ಹಾಕಿದ JSW ಸಂಸ್ಥೆ ವಿರುದ್ದ ಪ್ರತಿಭಟನೆ

ಮಂಗಳೂರು ಮೇ 22: ನವ ಮಂಗಳೂರು ಬಂದರಿನಲ್ಲಿರುವ JSW ಸಂಸ್ಥೆಯಿಂದ ಕರ್ನಾಟಕದ ದಿನಗೂಲಿ ಕಾರ್ಮಿಕರಿಗೆ ಅನ್ಯಾಯ ಆಗಿದೆ ಎಂದು ಆರೋಪಿಸಿ, ಕಾರ್ಮಿಕರು ಕಂಪೆನಿಯ ಗೇಟ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.


ನವಮಂಗಳೂರು ಬಂದರಿನಲ್ಲಿ JSW ಕಂಪೆನಿಗೆ ಬರುವ ಲಾರಿಗಳಿಗೆ ಟಾರ್ಪಾಲಿನ್ ಹಾಕುವ ಕೆಲಸವನ್ನು 45 ಕ್ಕೂ ಅಧಿಕ ಕಾರ್ಮಿಕರು ಕಳೆದ 6 ವರ್ಷಗಳಿಂದ ಮಾಡುತ್ತಿದ್ದು, ಅವರಿಗೆ ಲಾರಿ ಚಾಲಕರು ನೀಡುವ ಹಣದಿಂದ ಬದುಕು ನಡೆಸುತ್ತಿದ್ದರು. ಇದರಲ್ಲಿ ಕೆಲಸ ನಿರ್ವಹಿಸುತ್ತಿರುವ ಬಹುತೇಕ ಜನರು ಉತ್ತರ ಕರ್ನಾಟಕವದರಾಗಿದ್ದಾರೆ.

ಈ ನಡುವೆ ಇತ್ತೀಚೆಗೆ JSW ಸಂಸ್ಥೆ ಯಾವುದೇ ಸೂಚನೆ ನೀಡದೆ 42 ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದೆ ಎಂದು ಆರೋಪಿಸಲಾಗಿದೆ. ಬಹುತೇಕ ಕಾರ್ಮಿಕರು ಉತ್ತರಕರ್ನಾಟಕದವರಾಗಿದ್ದು ಅವರನ್ನು ಕೆಲಸದಿಂದ ವಜಾ ಮಾಡಿ ಇದೀಗ ಉತ್ತರ ಪ್ರದೇಶದ ಕಾರ್ಮಿಕರನ್ನು ನಿಯೋಜನೆ ಮಾಡಿದ್ದಾರೆ. ಕಳೆದ 15 ದಿನಗಳಿಂದ ಮಾತುಕತೆ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿಕ ಕಾರ್ಮಿಕರು. ತಮ್ಮ ಕುಟುಂಬ ಬಿದಿಗೆ ಬಂದಿದ್ದು, ಈ ಹಿನ್ನಲೆ ಇಂದು ಪಣಂಬೂರಿನಲ್ಲಿರುವ ಕಂಪನಿಯ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾರ್ಮಿಕನೊಬ್ಬ ಪಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ಕೂಡಲೇ ಸ್ಥಳದಲ್ಲಿದ್ದವರು ತಪ್ಪಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *