LATEST NEWS
ಪತ್ನಿಗೆ ಟೆರರಿಸ್ಟ್ ಗಳೊಂದಿಗೆ ನಂಟು ಇದೆ ಎಂದು ಪೊಲೀಸರಿಗೆ ದೂರು ನೀಡಿದ ಪತಿ..!!

ಮಂಗಳೂರು ಸೆಪ್ಟೆಂಬರ್ 02: ತನ್ನ ಪತ್ನಿಗೆ ಟೆರರಿಸ್ಟ್ ಗಳೊಂದಿಗೆ ನಂಟು ಇದ್ದು ಈ ಕುರಿತಂತೆ ಸಮಗ್ರ ತನಿಖೆ ನಡೆಸುವಂತೆ ಪತಿಯೊಬ್ಬ ದಕ್ಷಿಣಕನ್ನಡ ಜಿಲ್ಲಾ ಎಸ್ಪಿಗೆ ದೂರು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನಿವಾಸಿ ಚಿದಾನಂದ ಕೆ.ಆರ್. ಎಂಬವರು ಹೆಂಡತಿ ವಿರುದ್ಧ ಈ ರೀತಿಯಾಗಿ ದೂರು ನೀಡಿದ್ದಾರೆ. ಇವರ ಪತ್ನಿ ರಾಜಿ ರಾಘವನ್ ಕಳೆದ 11 ವರ್ಷಗಳಿಂದ ದುಬೈನಲ್ಲಿ ಉದ್ಯೋಗದಲ್ಲಿದ್ದರು. ಅಲ್ಲದೆ ಕಳೆದ 1 ವರ್ಷದಿಂದ ಕಳೆದ 1 ವರ್ಷದಿಂದ ದುಬೈನಲ್ಲಿರುವ ಪಾಕಿಸ್ತಾನದ ಶಾಲೆಯೊಂದರಲ್ಲಿ ಶಾಲಾ ವಾಹನದಲ್ಲಿ ಆಯಾ ಕೆಲಸ ನಿರ್ವಹಿಸುತ್ತಿದ್ದರು.

ಈ ನಡುವೆ ಜುಲೈ 21 ರಂದು ನೆರಿಯಾಕ್ಕೆ ಬಂದಿದ್ದ ರಾಜಿ, ಮತ್ತೆ ವಾಪಾಸ್ ಹೋಗುವಾಗಿ ತನ್ನ 12 ವರ್ಷ ಮಗಳನ್ನು ತನ್ನೊಟ್ಟಿಗೆ ಕಳುಹಿಸುವಂತೆ ಪತಿಗೆ ಒತ್ತಡ ಹಾಕಿದ್ದರು. ಆದರೆ ಪತಿ ಇದಕ್ಕೆ ಒಪ್ಪದಿದ್ದಾಗ ಮಗಳನ್ನು ಕಳುಹಿಸಿದಿದ್ದರೆ ತನ್ನ ಸಂಪರ್ಕದಲ್ಲಿರೊ ಉಗ್ರಗಾಮಿ ಸಂಘಟನೆಗಳಿಗೆ ಹೇಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪತಿ ಆರೋಪಿಸಿದ್ದಾರೆ.
ಇದೀಗ ಆಕೆ ಆಗಸ್ಟ್ 26ರಂದು ರಾತ್ರಿ ಮಗಳೊಂದಿಗೆ ಮಲಗಿದ್ದವಳು ನಸುಕಿನ ವೇಳೆ ಮನೆಯಿಂದ ನಾಪತ್ತೆಯಾಗಿದ್ದಾಳೆ. ಆಕೆ ಹೋಗುವಾಗ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಎರಡು ಚಿನ್ನದ ಬಳೆ, 95 ಸಾವಿರ ರೂ. ತೆಗೆದುಕೊಂಡು ಹೋಗಿದ್ದಾಳೆ ಎನ್ನಲಾಗಿದೆ. ಪತ್ನಿ ನಾಪತ್ತೆ ಬಳಿಕ ಲಕ್ಷ ದ್ವೀಪದ ಮೊಹಮ್ಮದ್ ಖಾಸಿಂ ಎಂಬಾತನಿಂದ ಬೆದರಿಕೆ ಕರೆ ಬಂದಿರೋದಾಗಿ ಚಿದಾನಂದ್ ದೂರಿನಲ್ಲಿ ತಿಳಿಸಿದ್ದಾರೆ.
ಚಿದಾನಂದ್ ಅವರಿಗೆ ಕರೆ ಮಾಡಿದ್ದ ಮೊಹಮ್ಮದ್ ಖಾಸಿಂ ಎಂಬಾತ, ಪತ್ನಿ ಮತ್ತು ಮಗಳನ್ನು ಕೇರಳದ ಮಲಪ್ಪುರಂಗೆ ಕರೆತರುವಂತೆ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ. ಇದೀಗ ರಾಜಿ ರಾಘವನ್ ನಾಪತ್ತೆಯಾಗಿರುವ ಬಗ್ಗೆ ಧರ್ಮಸ್ಥಳ ಠಾಣೆಗೆ ದೂರು ನೀಡಲಾಗಿದೆ. ಅಲ್ಲದೆ ಆಕೆಗೆ ಉಗ್ರ ಸಂಘಟನೆ ನಂಟು ಇದೆ ಎಂದು ಆರೋಪಿಸಿ ತನಿಖೆ ನಡೆಸುವಂತೆ ಎಸ್ಪಿಗೆ ದೂರು ನೀಡಲಾಗಿದೆ.