DAKSHINA KANNADA
ಕಾಂಗ್ರೇಸ್ ನಾಶಕ್ಕೆ ಕೊನೆಯ ಮೊಳೆ ಒಡೆಯುವುದು ಬಿಜೆಪಿಯಲ್ಲ, ಅದರಲ್ಲಿರುವ ಮುಸಲ್ಮಾನರೇ – ಹಿಂದೂ ಮುಖಂಡ ಗಣರಾಜ್ ಭಟ್

ಪುತ್ತೂರು ಜೂನ್ 04: ಕಾಂಗ್ರೇಸ್ ನಾಶಕ್ಕೆ ಕೊನೆಯ ಮೊಳೆ ಒಡೆಯುವುದು ಬಿಜೆಪಿಯಲ್ಲ, ಅದರಲ್ಲಿರುವ ಮುಸಲ್ಮಾನರೇ, ಅದ್ದರಿಂದ ಕಾಂಗ್ರೇಸ್ ನಲ್ಲಿರುವ ಹಿಂದೂಗಳು ಈ ವಿಚಾರವನ್ನು ಗಮನದಲ್ಲಿಡಿ ಎಂದು ಹಿಂದೂ ಮುಖಂಡ ಗಣರಾಜ್ ಭಟ್ ಎಚ್ಚರಿಕೆ ನೀಡಿದ್ದಾರೆ.
ಪುತ್ತೂರಿನಲ್ಲಿ ನಡೆದ ಹಿಂದೂ ನಾಯಕರ ಮೇಲಿನ ಗಡಿಪಾರು ನೋಟೀಸ್ ವಿರೋಧಿ ಸಭೆಯಲ್ಲಿ ಮಾತನಾಡಿದ ಗಣರಾಜ್ ಭಟ್ ,ಕಾಂಗ್ರೇಸ್ ನಲ್ಲಿರುವ ಹಿಂದುಗಳು ಒಂದು ವಿಚಾರವನ್ನು ಮನದಲ್ಲಿಟ್ಟುಕೊಳ್ಳಬೇಕು, ಮುಸಲ್ಮಾನನ ಮನಸ್ಸಿನಲ್ಲಿ ನೀವು ಕೂಡಾ ಕಾಫೀರನೇ, ಕಾಂಗ್ರೇಸ್ ನ ಹಿಂದೂ ನಾಯಕರ ಹೆಸರಿನಲ್ಲಿ ರಾಮ, ರಮಾನಾಥ ಇರುವ ತನಕ ನಿಮ್ಮನ್ನು ಮುಸ್ಲಿಮರು ನೋಡೋದು ಕಾಫೀರ ಎನ್ನುವ ಮನೋಭಾವದಲ್ಲಿ, ಇದಕ್ಕೆ ಸಂಶಯವೇ ಬೇಡ ಮುಂದಿನ ದಿನಗಳಲ್ಲಿ ಕಾಂಗ್ರೇಸ್ ನಾಶಕ್ಕೆ ಈ ಮುಸಲ್ಮಾನರೇ ಕೊನೆಯ ಮೊಳೆ ಹೊಡೆಯುತ್ತಾರೆ ಆಗ ನಿಮ್ಮನ್ನು ಎಡಗಾಲಿನಿಂದ ಒದ್ದು ಹೊರಗಟ್ಟುತ್ತಾರೆ.

ಕಾಂಗ್ರೇಸ್ ನ ಮುಸಲ್ಮಾನ ಮುಖಂಡರು SDPI ಜೊತೆ ಸೇರಿಕೊಂಡು ಈ ಪ್ರಯತ್ನವನ್ನು ಆರಂಭಿಸಿಯಾಗಿದೆ. ಕಾಂಗ್ರೇಸ್ ನ ಹಿಂದೂ ಮುಖಂಡರು ಗಮನವಿಟ್ಟು ಕೇಳಿ, ಮುಂದಿನ ಚುನಾವಣೆಗಳು ಬಿಜೆಪಿ ಕಾಂಗ್ರೇಸ್ ವಿರುದ್ಧ ನಡೆಯೋದಿಲ್ಲ. ಹಿಂದುತ್ವ ಮತ್ತು ಮುಸಲ್ಮಾನರ ವಿರುದ್ಧ ನಡೆಯುತ್ತೆ. ಇನ್ನಾದರೂ ಮುಸಲ್ಮಾನರೊಂದಿಗೆ ನೇತಾಡೋದನ್ನು ಬಿಟ್ಟು ಬಿಡಿ, ಕೇಸರಿ ಧ್ವಜಕ್ಕೆ ಬೆಂಕಿ ಬಿದ್ದಾಗಲೆಲ್ಲಾ ಭಜರಂಗದಳ, ಹಿಂದೂ ಜಾಗರಣ ವೇದಿಕೆ ಬೋರ್ಗರೆದು ಎದ್ದಿದೆ. ಒಡೆದು ಹೋದ ಹಿಂದೂ ಸಂಘಟನೆಗಳನ್ನು ಸಿದ್ಧರಾಮಯ್ಯ ಒಂದು ಮಾಡಿದ್ದಾನೆ . ಗಡಿಪಾರು, ಕೇಸು ಎಲ್ಲಾ ಮಾಡಿ ಹಿಂದೂ ಮುಖಂಡರನ್ನು , ಕಾರ್ಯಕರ್ತರನ್ನು ಒಂದು ಮಾಡಿದ್ದಾನೆ, ಇದನ್ನು ಸಿದ್ಧರಾಮಯ್ಯನಿಗೆ ಒಂದು ದೊಡ್ಡ ಸಲಾಂ, ಅವ ಗಡಿಪಾರು ಮಾಡುವಾಗ ಅವ ಭಜರಂಗ, ಹಿಂದೂ ಜಾಗರಣ ವೇದಿಕೆ, ಬಿಜೆಪಿ ಎಂದೆಲ್ಲಾ ನೋಡಿಲ್ಲ. ಎಲ್ಲಾ ಹಿಂದೂಗಳನ್ನು ಒಟ್ಟಿಗೆ ಸೇರಿಸಿ ಗಡಿಪಾರು ಆದೇಶ ಮಾಡಿದ್ದಾನೆ.
ಅವನಿಗೆ ಗೊತ್ತಿದೆ ಇವರೆಲ್ಲಾ ಒಂದೇ ಕೇಸರಿ ಬಣ್ಣದ ಶಾಲು ಹಾಕುವವರು, ಸದಾ ವತ್ಸಲೆ ಎಂದು ಸ್ಮರಿಸುವವರು ಎಂದು, ಅವ ನಮ್ಮನ್ನೆಲ್ಲಾ ಒಂದು ಮಾಡಿದಾಗ ಇನ್ನು ನಾವ್ಯಾಕೆ ಬೇರೆ ಬೇರೆ ಇರೋದು, ನಮ್ಮ ಪ್ರತಿಷ್ಟೆ ಎಲ್ಲಾ ಬದಿಗಿಟ್ಟು ಒಂದಾಗೋಣ ಮುಂದಿನ ಚುನಾವಣೆ ನಮ್ಮ ತಾಕತ್ತನ್ನ ತೋರಿಸುವ ಎಂದು ಹೇಳಿದ್ದಾರೆ.