LATEST NEWS
ಕುಂದಾಪುರ ಹಿಜಬ್ ವಿವಾದ – ತರಗತಿಗೆ ಬಂದ ವಿಧ್ಯಾರ್ಥಿನಿಯರನ್ನು ಮೈದಾನದಲ್ಲೆ ತಡೆದು ನಿಲ್ಲಿಸಿದ ಪ್ರಾಂಶುಪಾಲರು

ಕುಂದಾಪುರ ಫೆಬ್ರವರ 04: ಕುಂದಾಪುರ ಕಾಲೇಜು ಸ್ಕಾರ್ಫ್ ವಿವಾದ ತಾರಕಕ್ಕೇರಿದ್ದು, ಇಂದು ಮತ್ತೆ ಹಿಜಬ್ ಧರಿಸಿ ಬಂದ ವಿಧ್ಯಾರ್ಥಿನಿಯರನ್ನು ತರಗತಿಗೆ ಸೇರಿಸಲು ಕಾಲೇಜಿನ ಪ್ರಾಂಶುಪಾಲುರು ನಿರಾಕರಿಸಿದ್ದಾರೆ.
ಹಿಜಬ್ ಧರಿಸಿ ಕ್ಯಾಂಪಸ್ ಗೇಟ್ ದಾಟಿ ಒಳಗೆ ಬಂದ ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಂಶುಪಾಲರು ಮೈದಾನದಲ್ಲೇ ತಡೆದು ನಿಲ್ಲಿಸಿದ್ದಾರೆ. ಈ ಹಿನ್ನಲೆ ತರಗತಿಗೆ ಬಿಡುವಂತೆ ವಿದ್ಯಾರ್ಥಿನಿಯರು ಕೇಳಿಕೊಂಡಿದ್ದಾರೆ. ಇಂದು ವಿದ್ಯಾರ್ಥಿನಿಯರ ಜೊತೆ ಪೋಷಕರು ಕಾಲೇಜಿಗೆ ಆಗಮಿಸಿದ್ದು, ಉಪನ್ಯಾಸಕರು, ಪ್ರಾಂಶುಪಾಲರು ಕೂಡಾ ಮೈದಾನದಲ್ಲೇ ಮೊಕ್ಕಾಂ ಹೂಡಿದ್ದು,

ಇತರ ಉಪನ್ಯಾಸಕರಿಂದ ಮಕ್ಕಳ ಮನವೊಲಿಕೆ ಪ್ರಯತ್ನ ಮಾಡಿದ್ದಾರೆ. ನಮಗೆ ಕನಿಷ್ಟ ಪಕ್ಷ ಸ್ಟೇಜ್ ಬಳಿ ಕೂರಲು ಅವಕಾಶ ನೀಡುವಂತೆ ವಿದ್ಯಾರ್ಥಿನಿಯರು ಕಣ್ಣೀರ ಹಾಕಿದ ಘಟನೆ ಈ ಸಂದರ್ಭ ನಡೆಯಿತು. ಇದಕ್ಕೂ ಅವಕಾಶ ನೀಡದ ಹಿನ್ನಲೆ ಮೈದಾನದಲ್ಲೇ 20 ಮಂದಿ ಬಾಲಕಿಯರು ಕುಳಿತುಕೊಂಡಿದ್ದಾರೆ,
ಇನ್ನು ವಿಧ್ಯಾರ್ಥಿನಿಯರು ಜೊತೆ ಬಂದ ಪೋಷಕರಿಗೆ ಕುಂದಾಪುರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್ ತರಾಟೆಗೆ ತೆಗೆದುಕೊಂಡಿದ್ದು, ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರೆ FIR ಮಾಡುವ ಎಚ್ಚರಿಕೆ ನೀಡಿದ್ದಾರೆ.