Connect with us

LATEST NEWS

ಲ್ಯಾಂಬೋರ್ಗಿನಿ ಕಾರಿನಲ್ಲಿ ವೇಗವಾಗಿ ಬಂದು ಪಾದಚಾರಿಗೆ ಡಿಕ್ಕಿ ಹೊಡೆದು ಯಾರಾದ್ರು ಸತ್ತಿದಾರಾ ಎಂದು ಕೇಳಿದ ಯುವಕ

ನೋಯ್ಡಾ ಮಾರ್ಚ್ 31: ಯುವಕನೊಬ್ಬ ಲ್ಯಾಂಬೋರ್ಗಿನಿ ಕಾರಿನಲ್ಲಿ ವೇಗವಾಗಿ ಚಲಿಸಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಬಳಿಕ ಕಾರಿನಿಂದ ಇಳಿಯುವಾಗ ಯಾರಾದ್ರೂ ಸತ್ತಿದ್ರಾ ಎಂದು ಕೇಳಿದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಇದೀಗ ಯುವಕನ ಧಿಮಾಕಿನ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೋಯ್ಡಾದ ಸೆಕ್ಟರ್ 94 ರಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಈ ಘಟನೆ ನಡೆದಿದೆ. ಕಾರು ಏಕಾಏಕಿ ನುಗ್ಗಿದ ಕಾರಣ ನಿರ್ಮಾಣ ಹಂತದ ಕಟ್ಟಡದ ಶೆಡ್‌ನಲ್ಲಿದ್ದ ಇಬ್ಬರು ಕಾರ್ಮಿಕರಿಗೆ ಗಾಯಗಳಾಗಿವೆ. ಪೊಲೀಸರು ಕಾರು ಚಾಲಕ ದೀಪಕ್ ಕುಮಾರ್‌ನನ್ನು ಬಂಧಿಸಿದ್ದಾರೆ. ದೀಪಕ್ ಅಜ್ಮೀರ ಮೂಲದ ಕಾರು ಮಾರಾಟಗಾರನಾಗಿದ್ದು, ಈತ ಕಾರಿನ ಟೆಸ್ಟ್ ಡ್ರೈವ್‌ಗಾಗಿ ನೊಯ್ಡಾಗೆ ಬಂದಿದ್ದ. ಕಾರಿನ ಮಾಲೀಕ ಮೃದುಲ್ , ಸೆಕ್ಟರ್ 94 ರ ಸೂಪರ್ನೋವಾದ ನಿವಾಸಿ. ಅವರು ಯೂಟ್ಯೂಬರ್ ಆಗಿದ್ದು, 18.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಪೊಲೀಸರ ಪ್ರಕಾರ, ದೀಪಕ್ ಒಬ್ಬನೇ ಕಾರು ಚಲಾಯಿಸುತ್ತಿದ್ದಾಗ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಪ್ರಾಥಮಿಕ ತನಿಖೆಯಿಂದ ಪ್ರಕಾರ ದೀಪಕ್ ಭಾನುವಾರ ಬೆಳಗ್ಗೆ ಕಾರು ಟೆಸ್ಟ್ ಡ್ರೈವ್ ,ಮಾಡಲು ನೊಯ್ಡಾಗೆ ಬಂದಿದ್ದ. ಆತ ಕಾರನ್ನು ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡು ಹೋಗಿ, ಸ್ವಲ್ಪ ಶಾಪಿಂಗ್ ಕೂಡಾ ಮಾಡಿ, ವಾಪಸ್ ಕಾರನ್ನು ಮಾಲೀಕರಿಗೆ ಹಿಂದಿರುಗಿಸುವಾಗ ಆತನಿಗೆ ಕಾರಿನ ನಿಯಂತ್ರಣ ತಪ್ಪಿದೆ.
ಪಾದಚಾರಿ ಮಾರ್ಗದಲ್ಲಿ ಕುಳಿತಿದ್ದ ಕಾರ್ಮಿಕರಿಗೆ ಡಿಕ್ಕಿ ಹೊಡೆದಿದ್ದಾನೆ. ಇಬ್ಬರಿಗೂ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಇಬ್ಬರು ಕಾರ್ಮಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಪೊಲೀಸರು ದೀಪಕ್‌ನನ್ನು ವಿಚಾರಣೆ ನಡೆಸುತ್ತಿದ್ದಾರೆ.

ಕಾರು ನಿಂತ ನಂತರ, ಅಲ್ಲಿದ್ದ ಕಾರ್ಮಿಕರು ಮತ್ತು ಸಾರ್ವಜನಿಕರು ದೀಪಕ್‌ನನ್ನು ಪ್ರಶ್ನಿಸಿದ್ದಾರೆ. ಆಗ ದೀಪಕ್ “ಯಾರಾದರೂ ಸತ್ತಿದ್ದಾರಾ?” ಎಂದು ವಿಚಿತ್ರವಾಗಿ ಅಮಾನವೀಯವಾಗಿ ಕೇಳಿದ್ದಾನೆ. ಈ ಮಾತಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. . ಈ ಘಟನೆಯ 51 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಸಾರ್ವಜನಿಕರೊಬ್ಬರು “ನೀವು ಸ್ಟಂಟ್ ಪ್ರಾಕ್ಟೀಸ್ ಮಾಡುತ್ತಿದ್ದೀರಾ?” ಎಂದು ಕೇಳುತ್ತಾರೆ. ಅದಕ್ಕೆ ದೀಪಕ್ ಆರಾಮಾಗಿ “ಯಾರಾದ್ರೂ ಸತ್ತಿದ್ದಾರಾ?” ಎಂದು ಉತ್ತರಿಸುತ್ತಾನೆ. ಆಗ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಲು ಹೇಳುತ್ತಾರೆ. ಈ ಸಂಭಾಷಣೆಯು ವಿಡಿಯೋದಲ್ಲಿ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *