Connect with us

LATEST NEWS

ಬಂಟ್ವಾಳದಲ್ಲಿ ರಮಾನಾಥ ರೈ ಈ ಬಾರಿಯೂ ಗೆಲ್ಲುವುದಿಲ್ಲ – ಹರಿಕೃಷ್ಣ ಬಂಟ್ವಾಳ

ಮಂಗಳೂರು ಸೆಪ್ಟೆಂಬರ್ 15: ಬಂಟ್ವಾಳದಲ್ಲಿ ರಮಾನಾಥ ರೈ ಈ ಬಾರಿಯೂ ಗೆಲ್ಲುವುದಿಲ್ಲ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಮಾನಾಥ ರೈ ರಾಜಕೀಯ ಪ್ರವೇಶಿಸುವ ಮೊದಲು ನಾನು ರಾಜಕೀಯಕ್ಕೆ ಬಂದಿದ್ದೇನೆ. ಬಂಟ್ವಾಳದ ನರನಾಡಿ ಎಲ್ಲಾನೂ ಗೊತ್ತಿದೆ. ರಮಾನಾಥ ರೈ ಈ ಸಲವೂ ಓಟಿನಲ್ಲಿ ಗೆಲ್ಲೋದಿಲ್ಲ’ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಸವಾಲೆಸೆದಿದ್ದಾರೆ.


2023ರ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆಗೆ ಅನುಗುಣವಾಗಿ ರಮಾನಾಥ ರೈ ಮಾತಾಡಿದ್ದಾರೆ ಅನ್ನುವುದನ್ನು ತೋರಿಸುತ್ತದೆ. ಮೊನ್ನೆ ನಡೆದ ರಾಜ್ಯಮಟ್ಟದ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯಲು ಏನು ಕಾರಣ ಎಂಬುದನ್ನು ಉಸ್ತುವಾರಿ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಇವರ ಆಡಳಿತ ಇರುವ ಸಂದರ್ಭ ಕಾಟಾಚಾರಕ್ಕೆ 100 ಸಂಖ್ಯೆಯ ಒಳಗೆ ಜನರನ್ನು ಸೇರಿಸಿಕೊಂಡು ನಾರಾಯಣ ಗುರುಗಳ ಕಾರ್ಯಕ್ರಮವನ್ನು ಮಾಡಿದ್ದರು.

ಈ ರೀತಿ ನಾರಾಯಣ ಗುರುಗಳ ಕಾರ್ಯಕ್ರಮ ಮಾಡಿದ್ರೆ ಏನು ಪ್ರಯೋಜನ ಆಗುತ್ತೆ? ನಾರಾಯಣ ಗುರುಗಳಿಗೆ ಬಿಜೆಪಿಯಿಂದ ಅವಮಾನವಾಗುವಂತಹ ಸಂದರ್ಭ ಯಾವತ್ತೂ ಬರಲು ಸಾಧ್ಯವೇ ಇಲ್ಲ. ನಾವು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜೆಯನ್ನು ಸಲ್ಲಿಸಿದ ಬಳಿಕ ನಗರದ ಟಿಎಂಪೈ ಸಭಾಂಗಣದಲ್ಲಿ ನಾರಾಯಣ ಗುರುಗಳ ಜಯಂತಿಯನ್ನು ಆಚರಣೆ ಮಾಡಿದ್ದೇವೆ. ಹಾಗಿದ್ದ ಮೇಲೆ ಬಿಜೆಪಿಯಿಂದ ಗುರುಗಳಿಗೆ ಹೇಗೆ ಅವಮಾನವಾದಂತಾಗುತ್ತದೆ ರೈಗಳೇ..?ಎಲ್ಲಿಯಾದ್ರೂ ನಾವುಗಳು ನಾರಾಯಣ ಗುರುಗಳಿಗೆ ಅವಮಾನ ಮಾಡಿದ್ದೇವಾ…?.

ಮೊನ್ನೆ ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಹೆಸರು ಎತ್ತಿಲ್ಲ ಎಂಬ ಆರೋಪವನ್ನು ನೀವು ಮಾಡಿದ್ದೀರಿ. ಆದ್ರೆ ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರು ನಾರಾಯಣ ಗುರುಗಳ ಹೆಸರು ಹೇಳಿಯೇ ಭಾಷಣ ಆರಂಭ ಮಾಡಿದ್ದಾರೆ. ನಿಮಗೆ ಅನುಮಾನ ಇದ್ದರೆ ಬಿಜೆಪಿ ಜನಸ್ಪಂದನ ಕಾರ್ಯಕ್ರಮದ ವಿಡಿಯೋದ ಒಂದು ತುಣುಕು ತೆಗೆದು ನೋಡಿ ಎಂದು ಸವಾಲು ಎಸೆದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *