ಮಂಗಳೂರು ಜನವರಿ 23: ಉಡುಪಿ ಪರ್ಯಾಯ ಸಂದರ್ಭ ಜಿಲ್ಲಾಧಿಕಾರಿ ಕೇಸರಿ ಧ್ವಜ ಹಾರಿಸಿರುವುದಕ್ಕೆ ಕಾಂಗ್ರೇಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಗುರುಪುರ ವಜ್ರದೇಹಿ ಮಠದ ರಾಜ ಶೇಖರಾನಂದ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಇಲ್ಲಿನ ನಾಯಕರಿಗೆ ಧರ್ಮದ ಬಗ್ಗೆ ಅರಿವಿಲ್ಲ ಅಲ್ಲದೆ ಅವರ ಮನೆಯಲ್ಲಿಯೂ ಇದನ್ನು ಆಚರಿಸುತ್ತಾರಾ ಅಂತಾ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ನಮ್ಮಲ್ಲಿ ಭಗವಾಧ್ವಜಕ್ಕೆ ವಿಶೇಷವಾದ ಗೌರವ ಇದೆ ಅದು ಧರ್ಮಧ್ವಜ ಈಗ ಅಲ್ಲಿರುವಂತಹ ಜಿಲ್ಲಾಧಿಕಾರಿಗಳು ಸರ್ಕಾರದ ಒಂದು ಭಾಗವಾಗಿರಬಹುದು ಆದರೆ ಅವರದಾದ ಕೆಲವು ಕರ್ತವ್ಯಗಳಲ್ಲಿ ಅವರು ಭಾಗವಹಿಸಬೇಕು ಅದನ್ನ ನಿರ್ಬಂಧಿಸುವುದು ಸರ್ಕಾರದ ಕರ್ತವ್ಯ ಅಲ್ಲ ಎಂದರು.
ಇದನ್ನೂ ಓದಿ – ಕಾರ್ಕಳ ಮಿಯಾರು ಕಂಬಳಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ – ಮೂವರು ಸಾವು
ನಮ್ಮ ಧಾರ್ಮಿಕ ವ್ಯವಸ್ಥೆಯೊಳಗೆ ಅನ್ಯ ಮತೀಯ ಅಧಿಕಾರಿಯನ್ನು ತರ್ತಾರೆ. ಅದಕ್ಕೂ ಇವರು ಸಮರ್ಥನೆ ಮಾಡ್ತಾರೆ. ಹಿಂದೆ ಅನ್ಯಮತೀಯ ಜಿಲ್ಲಾಧಿಕಾರಿಯವರು ಅವರ ಧಾರ್ಮಿಕ ಕ್ಷೇತ್ರಕ್ಕೆ ಹೋಗಿದ್ರು. ಅವರನ್ನು ಸರ್ಕಾರ ತಡೆದಿದೆಯಾ..?ಎಂದು ಪ್ರಶ್ನಿಸಿದರು.
ಇದನ್ನೂ ಓದಿ-ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್
ಉಡುಪಿ ಪರ್ಯಾಯ ಅದೂರಿಯಾಗಿ ನಡೆದಿದೆ ಎಲ್ಲೂ ಸಮಸ್ಯೆಗಳಿಲ್ಲ ಇವರಿಗೆ ಸಮಸ್ಯೆ ಮಾಡಬೇಕು ಅನ್ನುವ ಹುನ್ನಾರ ಇದೆ ಅಂತ ಅನ್ನಿಸುತ್ತದೆ. ಕೆಲವು ಕಾರ್ಯಕ್ರಮಗಳಲ್ಲಿ ಒಂದು ಜೋಶ್ ಇರುತ್ತದೆ. ಈ ಹಿಂದೆ ಅಧಿಕಾರಿಗಳು ಡ್ಯಾನ್ಸ್ ಕೂಡ ಮಾಡಿದ್ದಾರೆ. ಅದನ್ನೆಲ್ಲ ಯಾಕೆ ಇವರು ತಪ್ಪು ಅಂತ ಭಾವಿಸುವುದು ಅಲ್ಲಿ ಜಾತಿಯನ್ನು ತರಬಾರದು . ಈಗ ನೋಡಿ ಅಲ್ಲಿ ಅನ್ಯ ಜಾತಿಯವರು ತರಕಾರಿ ಕಾಯಿ ಪಲ್ಯಗಳನ್ನೆಲ್ಲ ಹೊತ್ತುಕೊಂಡು ತರ್ತಾರೆ ಇಲ್ಲ ಇದು ನಿಮ್ಮದು ನಮ್ಮದಕ್ಕೆ ಸಂಬಂಧ ಇಲ್ಲ ಅಂತ ಅಲ್ಲಿ ಪರ್ಯಾಯದವರು ಅದನ್ನು ಬೇಡ ಅಂದಿಲ್ಲ ಎಂದರು.