Connect with us

DAKSHINA KANNADA

ಬಿಳಿನೆಲೆಯಲ್ಲಿ ಪೋಲೀಸ್ ಪತಿಯ ಗೂಂಡಾಗಿರಿ

ಪುತ್ತೂರು,ಸೆಪ್ಟಂಬರ್ 20: ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡುವ ಉದ್ಧೇಶದಿಂದ ಪೋಲೀಸ್ ಪೇದೆಯೊಬ್ಬರ ಪತಿಯೊಬ್ಬರು ತಮ್ಮ ಮೇಲೆ ಗೂಂಡಾಗಿರಿ ಪ್ರದರ್ಶಿಸಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಹಲ್ಲೆಗೊಳಗಾದ 6 ಜನ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಕಡಬ ಪೋಲೀಸ್ ಠಾಣಾ ವ್ಯಾಪ್ತಿಯ ಬಿಳಿನೆಲೆಯ ಕೈಕಂಬ ನರ್ಸರಿ ಮನೆಯ ನಾಗಪ್ಪ ಮಲೆಕುಡಿಯ ಕಡಬ ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರನ್ನೂ ದಾಖಲಿಸಿದ್ದಾರೆ. ಅರಣ್ಯ ಇಲಾಖೆಗೆ ಸೇರಿದ ಸುಮಾರು 4.50 ಎಕರೆ ಪ್ರದೇಶದಲ್ಲಿ ನಾಗಪ್ಪ ಮಲೆಕುಡಿಯ ತನ್ನ ಕುಟುಂಬದೊಂದಿಗೆ ಕಳೆದ ಹಲವು ವರ್ಷಗಳಿಂದ ವಾಸವಾಗಿದ್ದವರು. ಇತ್ತೀಚೆಗೆ ನಾಗಪ್ಪ ಮಲೆಕುಡಿಯರ ಸಂಬಂಧಿಯಾದ ಹಾಗೂ ಪ್ರಸ್ತುತ ಕಡಬ ಪೋಲೀಸ್ ಠಾಣೆಯಲ್ಲಿ ಪೇದೆಯಾಗಿರುವ ಪ್ರಮಿಳಾ ಎಂಬವರಿಗೆ ತಮ್ಮ ಜಾಗದಲ್ಲಿ ಕುಳಿತುಕೊಳ್ಳಲು ಅವಕಾಶವನ್ನು ನಾಗಪ್ಪ ಮಲೆಕುಡಿಯ ನೀಡಿದ್ದರು.ಆದರೆ ಇದನ್ನೇ ಬಂಡವಾಳವನ್ನಾಗಿಸಿ ಪ್ರಮಿಳಾ ಹಾಗೂ ಆಕೆಯ ಪತಿ ಪ್ರಕಾಶ್ ನಾಗಪ್ಪ ಗೌಡರನ್ನೇ ಜಾಗದಿಂದ ಹೊರ ಹಾಕಲು ಯತ್ನಿಸಿದ್ದಾರೆ. ಈ ಕಾರಣಕ್ಕಾಗಿ ಸೆಪ್ಟಂಬರ್ 17 ರ ನಡುರಾತ್ರಿ ಪ್ರಕಾಶ್ ಹಾಗೂ ಆತನ ಕೆಲವು ಸ್ನೇಹಿತರು ನಾಗಪ್ಪ ಗೌಡರ ಮನೆಗೆ ನುಗ್ಗಿ ನಾಗಪ್ಪ ಗೌಡ, ಅವರ ಪತ್ನಿ ಹಾಗೂ ಕೆಲಸಕ್ಕೆ ಬಂದಿದ್ದ ಎಲ್ಲರಿಗೂ ಥಳಿಸಿದ್ದಾರೆ. ಅಲ್ಲದೆ ಕೊಲೆ ಬೆದರಿಕೆಯನ್ನೂ ನೀಡಿದ್ದಾರೆ ಎಂದು ನಾಗಪ್ಪ ಗೌಡ ಆರೋಪಿಸಿದ್ದಾರೆ. ಆರೂ ಜನರನ್ನು ಪ್ರಕಾಶ್ ತಮ್ಮ ಮನೆಯಲ್ಲಿ ಅಕ್ರಮವಾಗಿ ಬಟ್ಟೆ ಬಿಟ್ಟಿ ಕೂಡಿ ಹಾಕಿದ್ದಾರೆನ್ನುವ ದೂರನ್ನೂ ನಾಗಪ್ಪ ಮಲೆಕುಡಿಯ ಕಡಬ ಪೋಲೀಸರಿಗೆ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *