Connect with us

DAKSHINA KANNADA

ಬಾವಿಗೆ ಬಿದ್ದ ಹೆಂಡತಿಯನ್ನು ರಕ್ಷಿಸಲು ಹೋಗಿ ಬಾವಿಯಲ್ಲೇ ಬಾಕಿಯಾದ ಗಂಡ

ಪುತ್ತೂರು, ಅಗಸ್ಟ್ 31: ಬಾವಿ ನೀರು ಸೇದುವ ವೇಳೆಯಲ್ಲಿ ಆಯತಪ್ಪಿ ಬಿದ್ದ ಹೆಂಡತಿಯನ್ನು ರಕ್ಷಿಸಲು ಇಳಿದ ಗಂಡನೂ ಬಾವಿಯಲ್ಲೇ ಬಾಕಿಯಾದ ಘಟನೆ ತಾಲೂಕಿನ ಕೆಯ್ಯರು ಗ್ರಾಮದ ಮಾಡಾವು ಎಂಬಲ್ಲಿ ನಡೆದಿದೆ.

ನಿನ್ನೆ ಮುಂಜಾನೆ ಸುನಂದಾ ಅವರು ನೀರು ಸೇದಲೆಂದು ಬಾವಿಯ ಸಮೀಪ ತೆರಳಿದ್ದರು. ಈ ವೇಳೆ ಅವರು ಆಕಸ್ಮಾತ್ ಸುಮಾರು 60 ಅಡಿ ಆಳದ ಬಾವಿಗೆ ಬಿದ್ದಿದ್ದರು. ಅವರನ್ನು ರಕ್ಷಿಸಲೆ೦ದು ಪತಿ ಸದಾಶಿವ ರೈ ಅವರು ಬಾವಿಗೆ ಇಳಿದಿದ್ದರು. ಪತ್ನಿಯನ್ನು ನೀರಿನಿಂದ ಮೇಲೆತ್ತಿ ರಕ್ಷಣೆ ಮಾಡಿದ್ದರೂ ಅವರನ್ನು ಬಾವಿಯಿಂದ ಮೇಲಕ್ಕೆತರಲು ಸಾಧ್ಯವಾಗದೆ ಇಬ್ಬರೂ ಬಾವಿಯಲ್ಲಿದ್ದ ಕಲ್ಲು ಹಿಡಿದುಕೊಂಡು ನಿಂತಿದ್ದರು.

ಮಾಹಿತಿ ಅರಿತ ಪುತ್ತೂರು ಅಗ್ನಿಶಾಮಕ ದಳದ ಠಾಣಾಧಿಕಾರಿ ರುಕ್ಕಯ್ಯ ಗೌಡ, ಸಿಬ್ಬಂದಿ ಮಂಜುನಾಥ, ಚಾಲಕ ಮೋಹನ್ ಜಾದವ್, ಗೃಹರಕ್ಷಕ ದಳದ ಚಂದ್ರ ಕುಮಾರ್ ತಕ್ಷಣವೇ ಸ್ಥಳಕ್ಕೆ ತೆರಳಿ ದಂಪತಿಯ ರಕ್ಷಣೆ ಮಾಡಿದರು

Share Information
Continue Reading
Advertisement
Click to comment

Leave a Reply

Your email address will not be published. Required fields are marked *