Connect with us

LATEST NEWS

ಗೋಹತ್ಯೆ ಖಂಡಿಸಿ ಗಂಗೊಳ್ಳಿಯಲ್ಲಿ ಸ್ವಯಂಪ್ರೇರಿತ ಬಂದ್…ಸಾವಿರಾರು ಜನರಿಂದ ಬೀದಿಗಳಿದು ಪ್ರತಿಭಟನೆ

ಉಡುಪಿ ಅಕ್ಟೋಬರ್ 1: ಗಂಗೊಳ್ಳಿ ಪರಿಸರದಲ್ಲಿ ನಡೆದಿರುವ ಗೋಹತ್ಯೆಯನ್ನು ಖಂಡಿಸಿ ಗಂಗೊಳ್ಳಿಯಲ್ಲಿ ಇಂದು ಸ್ವಯಂಪ್ರೇರಿತ ಬಂದ್ ಆಚರಿಸಾಗಿದೆ.


ಹಿಂದೂ ಜಾಗರಣ ವೇದಿಕೆ ಕರೆ ನೀಡಿರುವ ಈ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಗೋ ಹತ್ಯೆಯನ್ನು ಖಂಡಿಸಿ ಗಂಗೊಳ್ಳಿಯಲ್ಲಿ ಸಾವಿರಾರು ಜನರಿಂದ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.


ಗಂಗೊಳ್ಳಿಯ ಮೀನುಗಾರಿಕಾ ಬಂದರು ನಿಂದ ಹೊರಟಿರುವ ಸುಮಾರು 5000ಕ್ಕೂ ಅಧಿಕ ಜನರು, ಗಂಗೊಳ್ಳಿಯ ಪ್ರಮುಖ ಬೀದಿಗಳ ಮೂಲಕ ಸಾಗಿ ಗೋ ಹಂತಕರ ವಿರುದ್ಧ ಘೋಷಣೆ ಕೂಗಿದ್ದಾರೆ. ಅಲ್ಲದೆ ಗಂಗೊಳ್ಳಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಮಸೀದಿ ಮತ್ತು ಕಸಾಯಿಖಾನೆಗಳನ್ನು ಕೂಡಲೇ ಮುಚ್ಚಲು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಈ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಬಾಗಿಯಾಗಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಪೊಲೀಸರ ಬಂದೋಬಸ್ತ್ ಏರ್ಪಡಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *