ಪುತ್ತೂರು, ಅಕ್ಟೋಬರ್ 21: ತಾಲೂಕು ಕ್ರೀಡಾಂಗಣದಲ್ಲಿ ಕೇವಲ ಕ್ರೀಡೆಗಾಗಿ ಮಿಸಲಿಡದು ನಿರ್ಧರಿಸಲಾಗಿತ್ತು. ಇಂದು ಟ್ರಸ್ಟ್ ನ ಕಾರ್ಯಕ್ರಮಕ್ಕೆ ಕ್ರೀಡಾಂಗಣವನ್ನು ಕೊಟ್ಟವರು ಯಾರು. ಜಿಲ್ಲಾಡಳಿತ ಕೊಟ್ಟಿದೆಯೋ, ಅಥವಾ ಯುವಜನ ಕ್ರೀಡಾ ಇಲಾಖೆ ಕೊಟ್ಡಿದೆಯೋ, ಯಾವ ಷರತ್ತುಗಳನ್ನು ಹಾಕಿ ಕೊಟ್ಡಿದ್ದಾರೆ.
ಸರಕಾರ ಆರ್.ಎಸ್.ಎಸ್ ಬ್ಯಾನ, ಕಾರ್ಯಕ್ರಮ ಮಾಡಲು ಕೆಲವು ನಿಷೇಧ ಹೇರಿದೆ. ಬೆಂಗಳೂರಿನ ಐಪಿಎಲ್ ಸಂಭ್ರಮಾಚರಣೆಯ ವೇಳೆ ನಡೆದ ದುರ್ಘಟನೆ ಬಳಿಕ ಇನ್ನಷ್ಟು ಕಠಿಣ ಕ್ರಮಗಳನ್ನೂ ತೆಗೆದುಕೊಂಡಿತ್ತು. ಒಂದು ಕಾರ್ಯಕ್ರಮ ನಡೆಯುವಾಗ ಯಾವ ಜಾಗದಲ್ಲಿ ಎಷ್ಡು ಜನ ಸೇರುತ್ತಾರೆ ಎನ್ನುವ ಲೆಕ್ಕಾಚಾರ ಮಾಡಬೇಕು. ಅದೇ ರೀತಿ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದ ಟ್ರಸ್ಟ್ ನ ಕಾರ್ಯಕ್ರಮಕ್ಕೆ ಒಟ್ಟು 10 ಸಾವಿರ ಚೇರ್ ಹಾಕಿದ್ದರು. 10 ಸಾವಿರ ಚೇರ್ ಹಾಕಿ 1 ಲಕ್ಷ ಜನರನ್ನು ಸೇರಿಸುವಾಗ ಪೋಲೀಸ್ ಇಲಾಖೆ ಏನು ಮಾಡುತ್ತಿತ್ತು? ಇದಕ್ಕೆ ಅನುಮತಿ ಕೊಟ್ಟವರು ಎಲ್ಲಿದ್ದಾರೆ? .
ಪೋಲೀಸ್ ಇಲಾಖೆ ಮತ್ತು ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟ ಇಲಾಖೆಗಳು ನಿಯಮಬಾಹಿರವಾಗಿ ಈ ಕಾರ್ಯಕ್ರಮ ನಡೆಸಲು ಅನುಮತಿ ಕೊಟ್ಟಿದೆ ಎಂದು ತಿಳಿಯುತ್ತಿದೆ.
ಘಟನೆ ಆದ ಸಂದರ್ಭದಲ್ಲಿ ಪೋಲೀಸ್ ಇಲಾಖೆ ಯಾವ ಕ್ರಮವನ್ನು ಕೈಗೊಂಡಿದೆ. 13 ಜನ ಅಸ್ವಸ್ಥಗೊಂಡಿದ್ದಾರೆ. ಅದರಲ್ಲಿ ಇಬ್ಬರು ಇನ್ನೂ ಒಳರೋಗಿಯಾಗಿದ್ದಾರೆ. ಘಟನೆ ನಡೆದ ಆಸ್ಪತ್ರೆಗೆ ದಾಖಲಾದಾಗ ಸರಕಾರಿ ಆಸ್ಪತ್ರೆಯ ವೈದ್ಯರು ಪೋಲೀಸ್ ಠಾಣೆಗೆ ಇಂಟಿಮೇಶನ್ ಕೊಟ್ಟಿದ್ದಾರಾ? ಸರಕಾರಿ ವೈದ್ಯರು ಇಷ್ಟು ಜನಕ್ಕೆ ಚಿಕಿತ್ಸೆ ಕೊಡುವಾಗ ಅದನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರಾ?
ಪೋಲೀಸ್ ಇಲಾಖೆ ಎಫ್ಐಆರ್ ಮಾಡಿದೆಯೋ, ಮಾಡಿದ್ದರೆ ಯಾರ ಮೇಲೆ ಮಾಡಿದೆ ಎಂದು ತಿಳಿಸಬೇಕು. ಬೆಂಗಳೂರಿನ ಘಟನೆಯಲ್ಲಿ ಪೋಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದರು. ಇಲ್ಲೇನು ಮಾಡಿದ್ದೀರಿ? ಇಲ್ಲಿ ಜೀವಹಾನಿ ಸಂಭವಿಸಿಲ್ಲ, ಆದರೆ ಆಸ್ಪತ್ರೆ ಸೇರುವ ಕೆಲಸ ನಡೆದಿದೆ. ಈ ಘಟನೆಗೆ ಸರಕಾರದ ನಿಲುವೇನು ಎಂದು ಸ್ಪಷ್ಟಪಡಿಸಬೇಕು. ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಈ ರೀತಿಯ ಬೇಜಾವಾಬ್ದಾರಿ ಕೆಲಸ ಮಾಡಿದ ಕೆಲವು ಇಲಾಖೆ ಮತ್ತು ಆಯೋಜಕರು ಮಾಡಿದ್ದಾರೆ.
ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಇಡೀ ಐಸ್ ಕ್ರೀಂ ಸ್ಟಾಲ್ ಗಳನ್ನು ಹಾಕಲಾಗಿತ್ತು. ಇದಕ್ಕೆ ಅನುಮತಿ ಕೊಟ್ಟವರು ಯಾರು?. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ದೇವಸ್ಥಾನಗಳು ಈ ಕಾರ್ಯಕ್ರಮಕ್ಕೆ ಶುಭ ಕೋರಿ ಬ್ಯಾನರ್ ಗಳನ್ನು ಅಳವಡಿಸಿದ್ದು, ಭಕ್ತರ ಹಣವನ್ನು ಈ ರೀತಿ ದುರುಪಯೋಗ ಪಡಿಸಲು ಅನುಮತಿ ಕೊಟ್ಟವರು ಯಾರು ಅನ್ನೋದರ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.