Connect with us

    LATEST NEWS

    ಹುಲಿ ಗಣತಿಗೆ ಹೋದ ಅರಣ್ಯ ರಕ್ಷಕಿ, ಹುಲಿ ದಾಳಿಗೆ ಬಲಿ; ಕರ್ತವ್ಯದಲ್ಲಿಯೇ ಸಾವಿಗೀಡಾದ ಫಾರೆಸ್ಟ್ ಗಾರ್ಡ್​

     

    ಮಹಾರಾಷ್ಟ್ರ, ನವೆಂಬರ್ 21: ವನ ಹಾಗೂ ವನ್ಯಜೀವಿಗಳ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುವವರೇ ವನ್ಯಪ್ರಾಣಿಗೆ ಬಲಿಯಾದಂಥ ದುರಂತ ಪ್ರಕರಣ. ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಾತಿ ದುಮಾನೆ ಎಂಬಾಕೆ ಮೃತಪಟ್ಟವರು.

    ಫಾರೆಸ್ಟ್ ಗಾರ್ಡ್​ ಆಗಿ ಕರ್ತವ್ಯದಲ್ಲಿದ್ದ ಇವರು ಅಖಿಲ ಭಾರತ ಹುಲಿ ಗಣತಿ ಕಾರ್ಯದಲ್ಲಿ ತೊಡಗಿದ್ದರು. ಆ ಪ್ರಕ್ರಿಯೆಯಲ್ಲಿ ಮಹಾರಾಷ್ಟ್ರದ ಟಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಇವರು ಕರ್ತವ್ಯನಿರತರಾಗಿದ್ದರು.

    ಹುಲಿ ಗಣತಿಯ ಕಾರ್ಯದಲ್ಲಿ ತೊಡಗಿದ್ದ ಫಾರೆಸ್ಟ್ ಗಾರ್ಡ್ ಮೇಲೆ ಹೆಣ್ಣು ಹುಲಿಯೊಂದು ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಸ್ವಾತಿ ದುಮಾನೆ ಕೊನೆಯುಸಿರೆಳೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply