Connect with us

    DAKSHINA KANNADA

    ಪ್ರಕೃತಿಯ ವೈಶಿಷ್ಟ – ನೆರೆ ನೀರಿನಲ್ಲೂ ತೋಟದ ಬಾವಿಯ ಸೊಬಗು

    ಉಪ್ಪಿನಂಗಡಿ ಜುಲೈ 21: ಕರಾವಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜಿಲ್ಲೆಯ ಎಲ್ಲಾ ನದಿಗಳು ತುಂಬಿ ಹರಿಯುತ್ತಿದೆ. ಹಲವು ನದಿಗಳು ಪ್ರವಾಹ ಪರಿಸ್ಥಿತಿ ತಂದಿದ್ದು, ತೋಟ ಮನೆಗಳಿಗೆ ನೀರು ನುಗ್ಗಿ ಕೃತಕ ನೆರೆ ಪರಿಸ್ಥಿತಿ ನಿರ್ಮಾಣವಾಗಿತ್ತು.


    ನೆರೆ ನೀರಿನಲ್ಲಿ ಮುಳುಗಿರುವ ತೋಟವೊಂದರ ಭಾವಿಯ ನೀರು ಏನು ಆಗದೆ ಹಾಗೆ ಉಳಿದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತೋಟದಲ್ಲಿದ್ದ ಬಾವಿಯ ನೀರು ಮೇಲ್ಮಟ್ಟದವರೆಗೆ ಬಂದಿದ್ದು. ಸುತ್ತಲೂ ಮಳೆ ನೀರು ತುಂಬಿದೆ..

    ಆವರಣ ಇರುವ ಬಾವಿಯ ನೀರು ಹಾಗೂ ಸುತ್ತಲಿನ ಪ್ರವಾಹದ ನೀರು ಸಂಪೂರ್ಣ ಬೇರ್ಪಟ್ಟ ಸ್ಥಿತಿಯಲ್ಲಿದ್ದು, ಅಪರೂಪದ ದೃಶ್ಯವೊಂದು ಪ್ರಕೃತಿಯ ವೈಶಿಷ್ಟ್ಯಕ್ಕೆ ಸಾಕ್ಷಿಯಾಗಿದೆ. ಇದು ಉಪ್ಪಿನಂಗಡಿ ಪರಿಸರದ ತೋಟವೊಂದರದ್ದು ಎಂದು ಹೇಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply