DAKSHINA KANNADA
ಕರಾವಳಿಯಲ್ಲಿ ಹೆಚ್ಚಿದ ತಾಪಮಾನಕ್ಕೆ ಅಲ್ಲಲ್ಲಿ ಬೆಂಕಿ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಪುತ್ತೂರು ಫೆಬ್ರವರಿ 21: ಕರಾವಳಿಯಲ್ಲಿ ಬೇಸಿಗೆ ಆರಂಭದಲ್ಲೇ ತಾಪಮಾನ ಹೆಚ್ಚಾಗಿದೆ. ಈಗಾಗಲೇ ಬಿಸಿಲು ಸಿಕ್ಕಾಪಟ್ಟೆ ಏರಿಕೆಯಾಗಿದ್ದು, ಈ ನಡುವೆ ಅಲ್ಲಲಿ ಆಕಸ್ಮಿಕವಾಗಿ ಬೆಂಕಿ ಬೀಳುತ್ತಿರುವ ಪ್ರಸಂಗಗಳು ಏರಿಕೆಯಾಗಿದೆ.
ಇತ್ತೀಚೆಗೆ ಬಜತ್ತೂರಿನ ಹೊಸಗದ್ದೆಯ ಅರಣ್ಯ ಸಮೀಪ ಬೆಂಕಿ ಬಿದ್ದಿತ್ತು. ಇದೀಗ ಪುತ್ತೂರಿನ ಲೋಕೋಪಯೋಗಿ ಇಲಾಖೆ ಆವರಣದ ಸಮೀಪ ಬೆಂಕಿ ಕಾಣಿಸಿಕೊಂಡಿದ್ದು, ಆವರಣಕ್ಕೆ ಅಳವಡಿಸಿದ್ದ ಅಲಂಕಾರಿಕ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿತ್ತು , ಬೆಂಕಿ ರಭಸಕ್ಕೆ ಅಲಂಕಾರಿಕವಾಗಿ ಇದ್ದ ಹುಲ್ಲು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸ್ಥಳೀಯರು ಬೆಂಕಿ ನಂದಿಸುವಲ್ಲಿ ಸಫಲರಾದರು.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
You must be logged in to post a comment Login