Connect with us

LATEST NEWS

ತನ್ನ ತಂಡದ ಸದಸ್ಯರಿಲ್ಲದ ಹಿನ್ನಲೆ ಸನ್ಮಾನ ನಿರಾಕರಿಸಿದ ಉಪ್ಪಿನಂಗಡಿ ಎಸೈ ನಂದಕುಮಾರ್

ತನ್ನ ತಂಡದ ಸದಸ್ಯರಿಲ್ಲದ ಹಿನ್ನಲೆ ಸನ್ಮಾನ ನಿರಾಕರಿಸಿದ ಉಪ್ಪಿನಂಗಡಿ ಎಸೈ ನಂದಕುಮಾರ್

ಪುತ್ತೂರು ಅಗಸ್ಟ್ 2: ಅಗಾಧ ಪ್ರಮಾಣದ ಗಾಂಜಾ ಪತ್ತೆ, ದರೋಡೆ ಪ್ರಕರಣ ಪತ್ತೆ ಸಹಿತ ಹಲವು ಅಪರಾಧ ಪ್ರಕರಣ ಗಳನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಂದ ಕುಮಾರ್ ನೇತೃತ್ವದ ಅಪರಾಧ ಪತ್ತೆ ತಂಡ ಕ್ಕೆ ಸನ್ಮಾನಿಸಿ ಅಭಿನಂಧಿಸಲು ಇಚ್ಲಂಪಾಡಿ ಯ ನೀತಿ ತಂಡ ಗುರುವಾರ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಆಗಮಿಸಿತ್ತು.

ಅಪರಾಧ ಪತ್ತೆ ತಂಡದ ನಾಲ್ವರು ಪೊಲೀಸ್ ಸಿಬ್ಬಂದಿ ಗಳು ಅನ್ಯ ಕಾರ್ಯ ನಿಮಿತ್ತ ಹೊರಗಿದ್ದರು. ಸಾಧನೆ ಹಿಂದೆ ಶ್ರಮಿಸಿದ ಪೊಲೀಸ್ ಸಿಬ್ಬಂದಿ ಗಳಿಲ್ಲದೆ ಸನ್ಮಾನ ವಾಗಲಿ, ಅಭಿನಂದನೆಯಾಗಲಿ ತಾನು ಸ್ವೀಕರಿಸಲಾರೆನೆಂದು ಪಟ್ಟು ಹಿಡಿದ ಎಸೈ ನಂದಕುಮಾರ್ ಸನ್ಮಾನ ಸ್ವೀಕರಿಸಲು ನಿರಾಕರಿಸಿದರು.

ಸತತ ಮನವಿಗೂ ಜಗ್ಗದ ನಂದಕುಮಾರ್ ರವರ ಮಾತಿನ ಮೋಡಿಗೆ ಸಿಲುಕಿ ನೀತಿ ತಂಡ ಮುಂದಿನ ದಿನಾಂಕ ನಿಗದಿ ಪಡಿಸಿ ತಿಳಿಸುವುದಾಗಿ ಹೇಳಿ ನಿರ್ಗಮಿಸಿತು. ತಳ ಹಂತದ ಪೊಲೀಸ್ ಸಿಬ್ಬಂದಿ ಗಳಿಗೂ ಗೌರವ ನೀಡಿ ಮಡಿಲಿಗೆ ಬಂದ ಮಾನ ಸನ್ಮಾನವನ್ನು ನಿರಾಕರಿಸಿದ ಎಸೈ ನಂದಕುಮಾರ್ ರವರ ನಡೆ ವಿಶೇಷ ವೆನಿಸಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *