Connect with us

    KARNATAKA

    ಮಂಡ್ಯದಲ್ಲೊಂದು ಭೀಕರ ದುರಂತ..! ಮಲಗಿದಲ್ಲೇ ತಂದೆ – ಮಗ ಸಜೀವ ದಹನ..!

    ಮಂಡ್ಯ: ಮಲಗಿದಲ್ಲೇ ಬಿದ್ದ ಅಕಸ್ಮಿಕ ಬೆಂಕಿಗೆ ತಂದೆ ಮತ್ತು ಆತನ ಪುಟ್ಟ ಮಗ ಇಬ್ಬರು ಸಜೀವ ದಹನಗೊಂಡ ಹೃದಯವಿದ್ರಾವಕ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ಸಂಭವಿಸಿದೆ.

    ದುರ್ಘಟನೆಯಲ್ಲಿ ಇಬ್ಬರು ಸಜೀವ ದಹನಗೊಂಡಿದ್ದರೆ, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ . ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಸಮೀಪದ ಅಗಚಹಳ್ಳಿ ಗ್ರಾಮದಲ್ಲಿ ಈ ದುರಂತ ನಡೆದಿದೆ.

    ಹಾಸನ ನಿವಾಸಿ ದೀಪಕ್ (33) ಮತ್ತು ಆತನ ಮಗ ತನ್ವಿತ್ (4) ಬೆಂಕಿಗಾಹುತಿಯಾದ ನತದೃಷ್ಟರಾಗಿದ್ದಾರೆ.. ಘಟನೆಯಲ್ಲಿ ಮನೆ ಮಾಲೀಕ ಭರತ್​ಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಚಿಕ್ಕಮಗಳೂರಿನ ಮೂಡಿಗೆರೆ ಮೂಲದ ಭರತ್ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಈ ಬೆಂಕಿ ಅವಘಡ ಸಂಭವಿಸಿದೆ. ಅಕ್ಕಪಕ್ಕದ ಮನೆಯವರು ಬೆಂಕಿ ದುರಂತ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮೃತ ದೀಪಕ್ ತನ್ನ ಪತ್ನಿ ಜೊತೆ ಮನಸ್ತಾಪಗೊಂಡಿದ್ದ ಹಿನ್ನೆಲೆ ಮಗನ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ದುರ್ಘಟನೆಗೆ ಸ್ಪಷ್ಟ ಕಾರಣಗಳು ಇನ್ನು ಪೊಲಿಸ್ ತನಿಖೆಯಿಂದ ತಿಳಿದು ಬರಬೇಕಿದೆ.

    ಸದ್ಯ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಅವಘಡ ಸಂಭವಿಸಿದ್ದರ ಬಗ್ಗೆ ತನಿಖೆಗೆ ಆರಂಭಿಸಿದ್ದಾರೆ,-.ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply