Connect with us

DAKSHINA KANNADA

ಎಂಪವರ್ ಇಂಟೀರಿಯರ್ಸ್ ನ ನೂತನ ಶೋ ರೂಂ ಕುಡುಪು ಪಾಲ್ದನೆಯಲ್ಲಿ ಶುಭಾರಂಭ

ಮಂಗಳೂರು, ಮೇ 06: ಎಂಪವರ್ ಇಂಟೀರಿಯರ್ಸ್ ನ ನೂತನ ಶೋ ರೂಂ ನಗರದ ಹೊರವಲಯ ಕುಡುಪು ಪಾಲ್ದನೆಯಲ್ಲಿ ಶುಭಾರಂಭಗೊಂಡಿತು.

ಇಂಟೀರಿಯರ್ ಕೆಲಸಕ್ಕೂ ಸಾಲ ಸೌಲಭ್ಯ ನೀಡುವ ಎನ್ನುವ ಹೆಗ್ಗಳಿಕೆಗೂ ಈ ಸಂಸ್ಥೆ ಪಾತ್ರವಾಗಿದ್ದು, ಚಿತ್ರನಟ ಭೋಜರಾಜ್ ವಾಮಂಜೂರು, ಸಂತ ಥೆರೆಸಾ ಚರ್ಚ್ ಧರ್ಮಗುರು ಫಾ.ಅಲ್ಬನ್ ಡಿಸೋಜ ಇತರ ಗಣ್ಯರು ಸೇರಿ ನೂತನ ಶಾಖೆಯನ್ನು ಉದ್ಘಾಟಿಸಿದರು. ಬಳಿಕ ಚಿತ್ರನಟ ಭೋಜರಾಜ್ ವಾಮಂಜೂರು ಮಾತನಾಡಿ ಕೆಲಸಗಾರರು, ಗ್ರಾಹಕರ ಸಹಿತ ಎಲ್ಲರ ಹಿತ ಬಯಸುವ ಉದಾತ್ತ ಗುಣ ಸಂಸ್ಥೆಯ ಮಾಲಕರದ್ದಾಗಿದೆ. ಅಲ್ಲದೆ ಇಂಟೀರಿಯರ್ ಕೆಲಸಕ್ಕೂ ಸಾಲದ ವ್ಯವಸ್ಥೆ ಮಾಡಿಕೊಡುವ ಏಕೈಕ ಸಂಸ್ಥೆ ಇದಾಗಿದೆ. ಇದರ ಬೆಳೆವಣಿಗೆ ನಿಟ್ಟಿನಲ್ಲಿ ಗ್ರಾಹಕರ ಸಹಕಾರ ಅಗತ್ಯ. ಮುಂದಕ್ಕೆ ಹಲವು ಶಾಖೆಗಳು ಆರಂಭಗೊಳ್ಳಲಿ ಎಂದು ಅವರು ಆಶಿಸಿದರು.

ಈ ಸಂದರ್ಭ ಸಂಸ್ಥೆಯ ಸ್ಥಾಪಕರಾದ ನಿಶಾನ್ ಕೃಷ್ಣ ಭಂಡಾರಿ ಮಾತನಾಡಿ, ನಮ್ಮಲ್ಲಿ ಫರ್ನೀಚರ್, ಸೋಫಾಸೆಟ್, ಕ್ವಾಟ್ಸ್ ಸಹಿತ ಗೃಹಬಳಕೆಯ ಪೀಠೋಪಕರಣಗಳು ಶೂನ್ಯ ಬಡ್ಡಿದರಲ್ಲಿ ನೀಡಲಾಗುತ್ತದೆ. ಗುಣಮಟ್ಟದ ಇಂಟೀರಿಯರ್ ಕೆಲಸ ಮಾಡಿಕೊಡುವ ಜೊತೆ ಸಾಲದ ವ್ಯವಸ್ಥೆನ್ನೂ ಮಾಡುವ ಪ್ರಥಮ ಶೋರೂಂ ಆಗಿದೆ ಎಂದವರು ಹೇಳಿದರು.

ದೀಪಕ್ ಶೆಟ್ಟಿ ಮಾತನಾಡಿ ಮನೆಗೆ ಬೇಕಾದ ಎಲ್ಲಾ ಫರ್ನೀಚರ್ ಪೀಠೋಪಕರಣ ಲಭ್ಯವಿದ್ದು ನೂತನ ಶೈಲಿಯಲ್ಲಿ ಹೊರಾಂಗಣ ಮತ್ತು ಒಳಾಂಗಣ ಇಂಟೀರಿಯರ್ ವಿನ್ಯಾಸ ಮಾಡುವ ನುರಿತ ಕೆಲಸಗಾರರನ್ನು ಒಳಗೊಂಡ ಸಂಸ್ಥೆ ಇದಾಗಿದೆ ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶನ್ ಆಚಾರ್ಯ, ನಮಿತಾ ಕಿಶಾನ್, ಸಂಸ್ಥೆಯ ನಿರ್ದೇಶಕ ಚಂದ್ರಶೇಖರ್, ಗೋಕುಲ ಮಾರ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *