Connect with us

LATEST NEWS

ಪೇಂಟಿಂಗ್ ವೇಳೆ ಹೈಟೆನ್ಶನ್‌ ವೈರ್‌ ತಾಗಿ ಕರೆಂಟ್ ಶಾಕ್ ; ವಳಚ್ಚಿಲ್ ಪದವು ನಿವಾಸಿ ಸಾವು

ಮಂಗಳೂರು ಡಿಸೆಂಬರ್ 07: ಪೆಂಟಿಂಗ್ ವೇಳೆ ವಿದ್ಯುತ್ ತಂತಿ ತಗುಲಿ ಪೆಂಟರ್ ಒಬ್ಬರು ಸಾವನಪ್ಪಿದ ಘಟನೆ ನಗರದ ಅಳಪೆ ವಾರ್ಡ್‌ನ ಶಿರ್ಲ ಪಡ್ಪುವಿನಲ್ಲಿ ನಡೆದಿದೆ. ಮೃತರನ್ನು ಬಂಟ್ವಾಳ ತಾಲ್ಲೂಕಿನ ಪರಂಗಿಪೇಟೆಯ ಅರ್ಕುಳ ವಳಚ್ಚಿಲ್ ನಿವಾಸಿ ಜೈನುದ್ದೀನ್ ಅಬ್ದುಲ್ ರೆಹಮಾನ್ (47) ಎಂದು ಗುರುತಿಸಲಾಗಿದೆ.


ಅಬ್ದುಲ್‌ ರಹಮಾನ್‌ ಅವರು ಶಿರ್ಲ ಪಡ್ಪುವಿನ ಹೆನ್ರಿ ಡಿಸೋಜ ಅವರ ಮನೆಯಲ್ಲಿ ಸೋಮವಾರ ಪೇಂಟಿಂಗ್‌ ಮಾಡುತ್ತಿದ್ದರು. ಮನೆಯ ಚಾವಣಿಯ ಬಳಿ ಏಣಿಯಲ್ಲಿ ನಿಂತು ಪೇಂಟಿಂಗ್‌ ಮಾಡುತ್ತಿದ್ದಾಗ ಹೈಟೆನ್ಷನ್ ವಿದ್ಯುತ್‌ ಹರಿಯುತ್ತಿದ್ದ ತಂತಿಯು ಏಣಿಯ ಸಂಪರ್ಕಕ್ಕೆ ಬಂದಿತ್ತು. ಇದರಿಂದ ವಿದ್ಯುದಾಘಾತಕ್ಕೆ ಒಳಗಾದ ಅವರು ಎರಡನೇ ಮಹಡಿಯಿಂದ ಕೆಳಕ್ಕೆ ಕುಸಿದು ಬಿದ್ದಿದ್ದರು. ಅವರೊಂದಿಗೆ ಕೆಲಸ ಮಾಡುತ್ತಿದ್ದ ರಾಜೇಶ್ ಮತ್ತು ಬಾಲಕೃಷ್ಣ ತಕ್ಷಣವೇ ಅವರನ್ನು ಆಂಬುಲೆನ್ಸ್‌ ಮೂಲಕ ಕರೆದೊಯ್ದು ನಗರದ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ದಾಖಲಿಸಿದ್ದರು. ಅವರು ಮಂಗಳವಾರ ಬೆಳಿಗ್ಗೆ 7.40ಕ್ಕೆ ಕೊನೆಯುಸಿರೆಳೆದಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *