Connect with us

    LATEST NEWS

    ಮಂಗಳೂರು ಭಾರಿ ಮಳೆಗೆ ಗುಜ್ಜರಕೆರೆ ಯಲ್ಲಿ ಧರೆಗೆ ಉರುಳಿದ ಮರ, ರಾತ್ರಿಯಾಗಿದ್ದರಿಂದ ತಪ್ಪಿದ ಅನಾಹುತ..!

    ಮಂಗಳೂರು : ಮಂಗಳೂರು ನಗರದಲ್ಲಿ ಮಂಗಳವಾರ  ತಡರಾತ್ರಿ  ಸುರಿದ ಭಾರಿ ಮಳೆ ಕಾರಣ ಇತಿಹಾಸ ಪ್ರಸಿದ್ಧ ಗುಜ್ಜರಕೆರೆ ಬಳಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು ರಾತ್ರಿಯಾಗಿದ್ದರಿಂದ  ಭಾರಿ ಅನಾಹುತ ತಪ್ಪಿದೆ.

    ಮರ ಬಿದ್ದ ಪರಿಣಾಮ ಗುಜ್ಜರ ಕೆರೆಯ ಸುತ್ತಲೂ ಮಕ್ಕಳು ಹಾಗೂ ಹಿರಿಯರ ಸುರಕ್ಷತೆಯ ದೃಷ್ಟಿಯಿಂದ ಹಾಕಲಾಗಿದ್ದ ಸ್ಟೀಲ್‌ ರೇಲಿಂಗ್‌ ಮುರಿದಿದೆ. ಸಂಜೆಯ ವೇಳೆ ಸದಾ ಇಲ್ಲಿ ವಾಕಿಂಗ್ ಮಾಡುವರ ಸಂಖ್ಯೆ ಹೆಚ್ಚಿದ್ದು  ರಾತ್ರಿ ವೇಳೆ ಕಾರಣದಿಂದಾಗಿ ಜನರು ಇತ್ತ ಕಡೆ ಸುಳಿದಿರಲಿಲ್ಲ. ಹೀಗಾಗಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

     

    ಮಾಹಿತಿ ತಿಳಿದ ಸ್ಥಳಿಯ ಶಾಸಕ ವೇದವ್ಯಾಸ ಕಾಮತ್ ಅವರು ಭೇಟಿ ನೀಡಿ ಅಗತ್ಯ ಕಾರ್ಯಾಚರಣೆಗೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply