Connect with us

DAKSHINA KANNADA

ಕೊನೆಗೂ ಸಿಕ್ಕ ನೆರೆಯಲ್ಲಿ ಕೊಚ್ಚಿ ಹೋಗಿದ್ದ ನಾಯಿ ಮರಿಗಳು….!!

ಕೊಲ್ಲಮೊಗ್ರ ಅಗಸ್ಟ್ 05: ಕರಾವಳಿಯಲ್ಲಿ ಸುರಿಯುತ್ತಿರುವ ಮಳೆ ಭಾರೀ ಅವಾಂತರವನ್ನೆ ಸೃಷ್ಠಿಸಿದೆ. ನೂರಾರು ಮನೆಗಳು ಜಲಾವೃತವಾಗಿದ್ದು, ಕೃಷಿ ಭೂಮಿಗಳು ಭೂಕುಸಿತಕ್ಕೆ ಸಂಪೂರ್ಣ ಹಾನಿಯಾಗಿವೆ. ಮಳೆ ಪ್ರವಾಹಕ್ಕೆ ಜನ ಜಾನುವಾರುಗಳು ಕೊಚ್ಚಿ ಹೋಗಿದೆ.


ಅಗಸ್ಟ್ 1 ರಂದು ಕೊಲ್ಲಮೊಗ್ರದ ಇಡೀ ಗ್ರಾಮ ಜಲಾವೃತಗೊಂಡಿದ್ದು, ಈ ಸಂದರ್ಭ ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಎರಡು ಮುದ್ದಾದ ನಾಯಿ ಮರಿಗಳು ಮತ್ತೆ ಮನೆ ಸೇರಿವೆ. ದೋಲನಮನೆ ಲಲಿತಾ ಎಂಬವರ ಮನೆ ಪ್ರವಾಹದಿಂದಾಗಿ ಕೊಚ್ಚಿಹೋಗಿತ್ತು, ಈ ಸಂದರ್ಭ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ನೀರುಪಾಲಾಗಿದ್ದವು, ಅಲ್ಲದೆ ಮನೆ ಹಸುವೊಂದು ನೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿತ್ತು. ಮನೆಯಲ್ಲಿ ಮುದ್ದಾಗಿ ಸಾಕಿದ ರಾಜು ಮತ್ತು ರಾಣಿ ಪಮೋರಿಯನ್ ಜಾತಿಯ ಶ್ವಾನಗಳು ನೆರೆಯಲ್ಲಿ ಕೊಚ್ಚಿ ಹೋಗಿದ್ದವು.

ಈ ನಡುವೆ ಎರಡು ದಿನಗಳ ಬಳಿಕ ದುಃಖದ ನಡುವೆ ಸಂತಸ ಕ್ಷಣ ಒಂದು ಎದುರಾಯಿತು. ಕೊಚ್ಚಿ ಹೋದ ರಾಜು- ರಾಣಿ ಶ್ವಾನಗಳು ಬದುಕಿವೆ ಎಂಬ ಮಾಹಿತಿಯು ದುಃಖದಲ್ಲಿದ್ದ ಕುಟುಂಬದಲ್ಲಿ ಸಂತಸ ಮೂಡಿಸಿದೆ. ಶ್ವಾನಗಳ ಪತ್ತೆ ಹಚ್ಚುವಲ್ಲಿ ಕೊಲ್ಲಮೊಗ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಶ್ರೀ ಚಾಂತಳ, ಗ್ರಾಮ ಪಂಚಾಯಿತಿ ಸದಸ್ಯ ಮಾಧವ ಚಾಂತಳ ಸಹಕರಿಸಿದ್ದಾರೆ ಎಂದು ಹೇಮಂತ್ ಸ್ಮರಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *