Connect with us

DAKSHINA KANNADA

ಡಾಬರ್‌ಮೆನ್‌ ನಾಯಿಗೆ ವಿಷವಿಟ್ಟು ಹತ್ಯೆ- ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು, ಜುಲೈ 27: ಪೂರ್ವದ್ವೇಷದ ಹಿನ್ನೆಲೆ ನೆರೆಮನೆಯ ವ್ಯಕ್ತಿಯೊಬ್ಬ ಡಾಬರ್ ಮನ್  ಸಾಕು  ನಾಯಿಗೆ ವಿಷ ಹಾಕಿ ಕೊಂದ ಬಗ್ಗೆ ನಗರದ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾತಿನಿಧಿಕ ಚಿತ್ರ

ನಗರದ ಕಾಪಿಕಾಡ್  4  ನೇ  ಕ್ರಾಸ್‌ನಲ್ಲಿದ್ದ ವ್ಯಕ್ತಿಯೊಬ್ಬರ  4 1/2 ವರ್ಷದ ಡಾಬರ್ ಮನ್  ನಾಯಿ ಸಾಕುತ್ತಿದ್ದರು. ಜು.24 ರಂದು ನೆರೆಮನೆಯ ಭೀಮಯ್ಯ ಎಂಬುವವರು  ಪೂರ್ವ ದ್ವೇಷದ ಹಿನ್ನೆಲೆಯಲ್ಲಿ  ನಾಯಿಗೆ  ವಿಷ  ಪದಾರ್ಥವನ್ನು  ಹಾಕಿದ್ದಾರೆ.

ಪರಿಣಾಮ ಜು.25 ರಂದು ನಾಯಿ ರಕ್ತ  ವಾಂತಿ  ಮಾಡಿಕೊಂಡು  ಮೃತಪಟ್ಟಿದೆ. ಈ ಹಿನ್ನೆಲೆ ನಾಯಿ ಸಾವಿಗೆ  ಕಾರಣನಾದ  ಬೀಮಯ್ಯ  ಎಂಬುವವರ  ವಿರುದ್ದ  ಸೂಕ್ತ  ಕಾನೂನು  ಕ್ರಮ ಕೈಗೊಳ್ಳಬೇಕಾಗಿ  ಸಾಕು ನಾಯಿಯ ಯಜಮಾನ ಉರ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *