Connect with us

LATEST NEWS

ಹಿಂದೂ ಕಾರ್ಯಕರ್ತರಿಗೆ ತ್ರಿಶೂಲ ಧಿಕ್ಷೆ ನೀಡಿದ ಬಜರಂಗದಳ….!!

ಮಂಗಳೂರು ಅಕ್ಟೋಬರ್ 15: ಆಯುಧ ಪೂಜೆ ದಿನವಾದ ನಿನ್ನೆ ತ್ರಿಶೂಲ ದೀಕ್ಷೆ ಹೆಸರಲ್ಲಿ ಹಿಂದೂ ಕಾರ್ಯಕರ್ತರಿಗೆ ಬಜರಂಗದಳದವರು ಶಸ್ತ್ರ ಹಂಚಿದ ಘಟನೆ ನಡೆದಿದ್ದು, ಕಾರ್ಯಕ್ರಮದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆದಿದೆ.


ಮಂಗಳೂರು ನಗರದ ಕದ್ರಿ ವಿಶ್ವಹಿಂದೂಪರಿಷತ್ ಕಚೇರಿಯಲ್ಲಿ ನಡೆದ ತ್ರಿಶೂಲ ದೀಕ್ಷೆ ಕಾರ್ಯಕ್ರಮದಲ್ಲಿ ಹಿಂದೂ ಕಾರ್ಯಕರ್ತರಿಗೆ ಚೂರಿ ಮಾದರಿಯ ತ್ರಿಶೂಲದಂಥ ಶಸ್ತ್ರವನ್ನ ಹಂಚಿಕೆ ಮಾಡಲಾಗಿದೆ.


ಮಂಗಳೂರಿನ ಕದ್ರಿಯ ವಿಶ್ವಹಿಂದೂಪರಿಷತ್ ಕಚೇರಿಯಲ್ಲಿ ವಿಎಚ್‌ಪಿ ವಿಭಾಗದ ಕಾರ್ಯದರ್ಶಿ ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ನಡೆದ ತ್ರಿಶೂಲ ದೀಕ್ಷೆ ಕಾರ್ಯಕ್ರಮ. ಸದ್ಯ ತ್ರಿಶೂಲ ದೀಕ್ಷೆ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿವೆ.
ಕಾರ್ಯಕರ್ತರ ಕೈಗೆ ಬಹಿರಂಗವಾಗಿಯೇ ಶಸ್ತ್ರ ಕೊಡುವ ಮೂಲಕ ಬಜರಂಗದಳ ವಿವಾದಾತ್ಮಕ ಹೆಜ್ಜೆಯನ್ನ ಇಟ್ಟಿದೆ. ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿ ಮಿತಿಮೀರಿದ ಬೆನ್ನಲ್ಲೇ ಬಜರಂಗದಳದ ಈ ನಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *