Connect with us

LATEST NEWS

ಹೊಸ ವರ್ಷಕ್ಕೆ ಅದ್ಭುತವಾಗಿ ತಯಾರಾದ ಶ್ರೀ ಕ್ಷೇತ್ರ ಧರ್ಮಸ್ಥಳ

ಮಂಗಳೂರು ಡಿಸೆಂಬರ್ 31: ಹೊಸ ವರ್ಷಾಚರಣೆ ಹಿನ್ನಲೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಾಂಪ್ರದಾಯಿಕ ಶೈಲಿಯಲ್ಲಿ ಅಲಂಕಾರಗೊಂಡಿದೆ. ಬೆಂಗಳೂರು ಮೂಲದ ಭಕ್ತರ ತಂಡದಿಂದ ಧರ್ಮಸ್ಥಳ ಕ್ಷೇತ್ರವನ್ನು ಸಂಪೂರ್ಣವಾಗಿ ಅಲಂಕಾರಗೊಳಿಸಿದೆ.


ಸುಮಾರು 80 ಮಂದಿ ಕುಶಲಕರ್ಮಿಗಳು ಎರಡು ದಿನಗಳಿಂದ ಅಲಂಕಾರ ಮಾಡಿದ್ದು, ಪ್ರಾಕೃತಿಕವಾಗಿ ಸಿಗುವ ವಸ್ತುಗಳಿಂದಲೇ ಶ್ರೀ ಕ್ಷೇತ್ರ ಅಲಂಕಾರವಾಗಿದೆ. ಕಬ್ಬು, ಕಲ್ಲಂಗಡಿ, ಅನನಾಸು ಸೇರಿದಂತೆ ವಿವಿಧ ಹಣ್ಣು-ಹಂಪಲುಗಳಿಂದ ಅಲಂಕಾರ ಮಾಡಲಾಗಿದೆ.

ತೆಂಗಿನ ಗರಿಗಳಿಂದ ಅದ್ಭುತವಾಗಿ ಸಿಂಗಾರ ಗೊಂಡ ಧರ್ಮಸ್ಥಳ, ದೇವಸ್ಥಾನದ ಒಳ ಮತ್ತು ಹೊರಭಾಗದಲ್ಲಿ ಅಲಂಕಾರ .ಅದ್ಭುತ ಅಲಂಕಾರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ದ ಚಿತ್ರಣವೇ ಬದಲಾಗಿದ್ದು, ಭಕ್ತರ ಮನಸೂರೆಗೊಂಡಿದೆ. ಹೊಸ ವರ್ಷವನ್ನು ಧರ್ಮಸ್ಥಳ ದಲ್ಲಿ ಕಳೆಯಲು ಈಗಾಗಲೇ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *