ಮಂಗಳೂರು ಅಗಸ್ಟ್ 12: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ 13ನೇ ಪಾಯಿಂಟ್ ನಲ್ಲಿ ಡ್ರೋನ್ ಡಿಪಿಆರ್ ಬಳಸಿ ಸ್ಕ್ಯಾನಿಂಗ್ ಮಾಡಿದ ಬಳಿಕ ಇದೀಗ ಅದೇ ಜಾಗದಲ್ಲಿ ಜೆಸಿಬಿ ಬಳಸಿ ನೆಲವನ್ನು ಅಗೆಯಲಾಗುತ್ತಿದೆ.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ 13ನೇ ಪಾಯಿಂಟ್ ಪ್ರಮುಖ ಪಾಯಿಂಟ್ ಆಗಿದ್ದು, ದೂರುದಾರನ ಮಾಹಿತಿ ಪ್ರಕಾರ ಇಲ್ಲಿ ಅತೀ ಹೆಚ್ಚು ಶವಗಳನ್ನು ಹೂತಿದ್ದೇನೆ ಎಂದಿದ್ದಾನೆ. ಆದರೆ ಈ ಜಾಗದಲ್ಲಿ ಕಿಂಡಿ ಅಣೆಕಟ್ಟು ಇರುವುದರಿಂದ ಇಲ್ಲಿ ನೆಲವನ್ನು ಅಗೆಯುವುದನ್ನು ಆರಂಭಿಸುವ ಮುನ್ನ ವಿಶೇಷ ತನಿಖಾ ತಂಡ (ಎಸ್ಐಟಿ) ನೆಲದಡಿ ಮೃತದೇಹಗಳ ಅವಶೇಷ ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಗೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಸಾಧನವನ್ನು ಬಳಸಿ ತಪಾಸಣೆ ನಡೆಸಲಾಗಿತ್ತು. ಜಿಪಿಆರ್ ಮೂಲಕ ಸಂಗ್ರಹಿಸಿರುವ ನೆಲದಡಿಯ ಚಿತ್ರಣಗಳನ್ನು ತಜ್ಞರು ವಿಶ್ಲೇಷಣೆಗೆ ಒಳಪಡಿಸಿದ್ದರು.

ಇದಾಗಿ ಸುಮಾರು 3 ಗಂಟೆ ಬಳಿಕ ಸಣ್ಣ ಯಂತ್ರವನ್ನು ಬಳಸಿ ನೆಲವನ್ನು ಅಗೆಯಲಾಯಿತು. ಬಳಿಕ ದೊಡ್ಡ ಯಂತ್ರವನ್ನು ತರಿಸಿಕೊಂಡು ಅಗೆಯುವ ಕಾರ್ಯ ಮುಂದುವರಿಸಲಾಗಿದೆ. ಇದಾಗಿ ಸುಮಾರು 3 ಗಂಟೆ ಬಳಿಕ ಸಣ್ಣ ಯಂತ್ರವನ್ನು ಬಳಸಿ ನೆಲವನ್ನು ಅಗೆಯಲಾಯಿತು. ಬಳಿಕ ದೊಡ್ಡ ಯಂತ್ರವನ್ನು ತರಿಸಿಕೊಂಡು ಅಗೆಯುವ ಕಾರ್ಯ ಮುಂದುವರಿಸಲಾಗಿದೆ.
ಯಾವ ಕಡೆ ಅಗೆಯಬೇಕೆಂದು ಸಾಕ್ಷಿ ದೂರುದಾರ ಸ್ಥಳದಲ್ಲೇ ಇದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ. ಎಸ್ಐಟಿ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರೂ ಸ್ಥಳದಲ್ಲಿದ್ದಾರೆ.